ರಾಷ್ಟ್ರೀಯ

ಮಳೆಯಿಂದ ನಲುಗಿದ ತಮಿಳುನಾಡಿಗೆ ಕೇಂದ್ರದಿಂದ 940ಕೋಟಿ ರೂ. ತುರ್ತು ಬಿಡುಗಡೆ

Pinterest LinkedIn Tumblr

chennai rain2222

ಚೆನ್ನೈ, ಡಿ.3-ವರುಣನ ಆರ್ಭಟದಿಂದ ಜರ್ಝರಿತಗೊಂಡಿರುವ ತಮಿಳುನಾಡಿನ ಜನತೆಯ ನೆರವಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಈಗಾಗಲೆ ತುರ್ತಾಗಿ 940ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಆದರೆ, ಮಳೆಯ ಹಾವಳಿಯಿಂದ ಸರ್ವನಾಶವಾಗಿರುವ ನಾಲ್ಕಾರು ಜಿಲ್ಲೆಗಳ ಲಕ್ಷಾಂತರ ಜನರಿಗೆ ಪರಿಹಾರ ಒದಗಿಸಲು ಈ ಹಣ ಏನೇನೂ ಸಾಲದು. ಆದ್ದರಿಂದ ಕೂಡಲೆ ಕನಿಷ್ಠ ಎರಡು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಚೆನ್ನೈ, ಕಾಂಚಿಪುರಂ, ತಿರುವಳ್ಳೂರ್, ಕಡಲೂರು ಜಿಲ್ಲೆಗಳು ಮಳೆಯಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಈ ಜಿಲ್ಲೆಗಳಲ್ಲಿ ಜಯಲಲಿತಾಅವರು ಇಂದು ವೈಮಾನಿಕ ಸಮೀಕ್ಷೆ ನಡೆಸಿದರು. ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ತಮಿಳುನಾಡಿನಲ್ಲಿ ಕನಿಷ್ಠ 10ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟ ಸಂಭವಿಸಿದೆ.

Write A Comment