ಆಶ್ರಮವೊಂದಕ್ಕೆ ತೆರಳಿದ್ದ ಟೆಕ್ಕಿಯ ಪತ್ನಿಯನ್ನು ಇಬ್ಬರು ನಕಲಿ ಸಾಧುಗಳು ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ಮೀರತ್ನಲ್ಲಿ ವರದಿಯಾಗಿದೆ.
ದೆಹಲಿಯ ದರ್ಯಾಗಂಜ್ ನಿವಾಸಿಯಾದ ಮಹಿಳೆ ವರ್ಷಕೊಮ್ಮೆ ಪೂರ್ಣಿಮೆಯ ದಿನದಂದು ಆಶ್ರಮದಲ್ಲಿ ಆಚರಿಸಲಾಗುವ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂಜಿನಿಯರ್ ಆಗಿರುವ ತನ್ನ ಪತಿಯೊಂದಿಗೆ ಮೀರತ್ನ ದೌರಾಲಾ ಬಳಿಯ ನಂಗ್ಲಿ ಆಜಾದ್ ಗ್ರಾಮದಲ್ಲಿರುವ ಆಶ್ರಮಕ್ಕೆ ತೆರಳಿದ್ದಳು.
ಈ ಸಮಯದಲ್ಲಿ ಸಾಧುಗಳ ವೇಷದಲ್ಲಿದ್ದ ಇಬ್ಬರು ವ್ಯಕ್ತಿಗಳು ಅವರನ್ನು ಅನುಸರಿಸಿ ಬರುವಂತೆ ತಿಳಿಸಿದ್ದು ಸನ್ಯಾಸಿಗಳೆಂಬ ಗೌರವದಲ್ಲಿ ದಂಪತಿಗಳು ಅವರಿಬ್ಬರನ್ನು ಹಿಂಬಾಲಿಸಿದ್ದಾರೆ. ಅವರಿಬ್ಬರನ್ನು ಆಶ್ರಮಕ್ಕೆ ಕರೆದುಕೊಂಡು ಹೋದ ಸಾಧುಗಳು ಪತಿಯನ್ನು ಒತ್ತೆಯಾಳಾಗಿಟ್ಟುಕೊಂಡು ಪತ್ನಿಯ ಮೇಲೆ ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ಅಲ್ಲಿಂದ ತಪ್ಪಿಸಿಕೊಂಡು ಬಂದ ಈ ದಂಪತಿ ಮಾನಕ್ಕೆ ಅಂಜಿ ಸುಮ್ಮನಿದ್ದರು ಎನ್ನಲಾಗಿದ್ದು ಏನಾದರೂ ಆಗಲಿ ಎಂಬ ಧೈರ್ಯದಿಂದ ಗುರುವಾರ ದೌರಾಲಾ ಪೊಲೀಸ್ ಠಾಣೆಗೆ ಬಂದು ಪ್ರಕರಣವನ್ನು ದಾಖಲಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಫೇರು ಮತ್ತು ರಾಜುಎಂಬುವವರನ್ನು ಬಂಧಿಸಿದ್ದು ಈ ನಡುವೆ ಆಶ್ರಮದ ಮುಖ್ಯಸ್ಥ ಪಿಂಕಿ ಮಹಾರಾಜ್ ಅವರಿಬ್ಬರು ನಮ್ಮ ಆಶ್ರಮಕ್ಕೆ ಸೇರಿದವರಲ್ಲ, ನಮಗವರು ಯಾರೆಂಬುದು ತಿಳಿದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.