ರಾಷ್ಟ್ರೀಯ

ನಿರಪರಾಧಿಗಳೆಂದು ಸಾಧಿಸಲು ಕುದಿವ ಎಣ್ಣೆಯಲ್ಲಿ ಮಕ್ಕಳ ಕೈ ಅದ್ದಿಸಿದ ದುರುಳರು

Pinterest LinkedIn Tumblr

children

ಸಗರ್ (ಮಧ್ಯಪ್ರದೇಶ), ಸೆ.14: ಕಳವು ಮಾಡಿದ್ದಾರೆ ಎಂದು ಶಂಕಿಸಿದ ವ್ಯಕ್ತಿಗಳು ಅಪ್ರಾಪ್ತ ವಯಸ್ಸಿನ ನಾಲ್ವರು ಮಕ್ಕಳ ಕೈಗಳನ್ನು ಬಲವಂತವಾಗಿ ಕುದಿಯುವ ಎಣ್ಣೆಯಲ್ಲಿ ಅದ್ದಿಸಿರುವ ಘಟನೆ ಮಧ್ಯಪ್ರದೇಶದ ಸಗರ್ ಜಿಲ್ಲೆಯ ಝೇಲಾ ಎಂಬ ಗ್ರಾಮದಲ್ಲಿ ನಡೆದಿದೆ.

ನಾಲ್ವರು ಮಕ್ಕಳು ತಮ್ಮ ಮನೆಯಲ್ಲಿ 500ರೂ. ಕಳವು ಮಾಡಿದ್ದಾರೆ ಎಂದು ಅನುಮಾನಗೊಂಡ ಮನೆಯವರು, ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಕುದಿಯುವ ಎಣ್ಣೆಯಲ್ಲಿ ಈ ನಾಲ್ವರು ಮಕ್ಕಳ ಕೈಗಳನ್ನು ಬಲವಂತದಿಂದ ಅದ್ದಿಸಿದ್ದಾರೆ. ನಂತರ ನೋವಿನಿಂದ ಕಿರುಚಾಡುತ್ತಿದ್ದ ಮಕ್ಕಳನ್ನು ತಮ್ಮ ಮನೆಯಲ್ಲೇ ಕೂಡಿ ಹಾಕಿದ್ದಾರೆ. ಅದು ಹೇಗೋ ಒಬ್ಬ ಬಾಲಕ ಅಲ್ಲಿಂದ ತಪ್ಪಿಸಿಕೊಂಡು ಬಂದು ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾನೆ. ಇದನ್ನು ತಿಳಿದ ಉಳಿದ ಮಕ್ಕಳ ಪೆÇೀಷಕರು ದುಷ್ಕರ್ಮಿಗಳ ಮನೆಗೆ ದಾವಿಸಿ ಮಕ್ಕಳನ್ನು ರಕ್ಷಿಸಿದ್ದಾರೆ.

ನಂತರ ಮಕ್ಕಳ ಪೆÇೀಷಕರ ದೂರಿನ ಮೇರೆಗೆ ಮಕ್ಕಳ ಕೈಗಳನ್ನು ಕುದಿಯುವ ಎಣ್ಣೆಯಲ್ಲಿ ಅದ್ದಿಸಿದ್ದ ಕುಟುಂಬದ ಸದಸ್ಯರನ್ನು ಪೆÇಲೀಸರು ಬಂಧಿಸಿದ್ದಾರೆ. ಮಕ್ಕಳಿಗೆ ಹಿಂಸೆ ನೀಡಿದ ಕುಟುಂಬದ ಸದಸ್ಯರು ಈಗ ಕಂಬಿ ಎಣಿಸುತ್ತಿದ್ದಾರೆ.

Write A Comment