ಕಾಸರಗೋಡು,ಡಿ.08 : ಅಜ್ಜ ನಿಧನ ಹೊಂದಿದ ದು:ಖವನ್ನು ಸಹಿಸಲಾಗದ ಯುವತಿಯೊಬ್ಬಳು ಅಜ್ಜ ಸತ್ತ ಕೆಲವೇ ಹೊತ್ತಿನಲ್ಲಿ ಬೆಂಕಿ ಇಕ್ಕಿಕೊಂಡು ಸತ್ತ ಅತ್ಯಂತ ಕಳವಳಕಾರಿ ಘಟನೆ ವರದಿಯಾಗಿದೆ.
ಯುವತಿ ರೇಷ್ಮಾ(22) ಅಜ್ಜ ಪಿ.ಕೆ.ಕಣ್ಣನ್(75) ಡಿ.7ರ ಬೆಳಿಗ್ಗೆ ಚೆರ್ವತ್ತೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಕಣ್ಣನ್ ಅವರಿಗೆ ಡಿ.6ರ ರಾತ್ರಿ ತೀವೃ ಹೃದಯಾಘಾತವಾಗಿತ್ತು.
ಅಜ್ಜ ಸತ್ತ ಸುದ್ದಿ ಸಹಿಸಲಾಗದ ಅಜ್ಜನ ಮುದ್ದಿನ ಮೊಮ್ಮಗಳು ರೇಷ್ಮಾ ಸ್ನಾನದ ಕೋಣೆಗೆ ತೆರಳಿ ಸೀಮೆಎಣ್ಣೆ ಸುರಿದು ಬೆಂಕಿ ಇಕ್ಕಿಕೊಂಡು ಸಾವಿಗೀಡಾಗಿದ್ದಾಳೆ.