ರಾಷ್ಟ್ರೀಯ

ಕಾರಿಗೆ ರೈಲು ಡಿಕ್ಕಿ: 13 ಮಂದಿ ದುರ್ಮರಣ

Pinterest LinkedIn Tumblr

ac

(ಸಾಂದರ್ಭಿಕ ಚಿತ್ರ)

(ರಾಮಗಢ)ಜಾರ್ಖಂಡ್: ರೇಲ್ವೆ ಕ್ರಾಸಿಂಗ್ ಬಳಿ ಕಾರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 13 ಮಂದಿ ದುರ್ಮರಣ ಹೊಂದಿದ್ದಾರೆ.

ಹೌರಾ-ಭೂಪಾಲ್ ಎಕ್ಸ್‌ಪ್ರೆಸ್‌ ರೈಲು ರಾಮಗಢ ಜಿಲ್ಲೆಯ ಬುರ್ಕುಂಡಾ ರೇಲ್ವೆ ನಿಲ್ದಾಣ ಬಳಿ ಕಳೆದ ರಾತ್ರಿ ಕಾರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಐವರು ಮಕ್ಕಳು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ.

ಪತ್ರತು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ ಎಸ್ಪಿ ಎಂ. ತಮಿಳವವನ್ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Write A Comment