ಕುಂದಾಪುರ: ಶಿವಮೊಗ್ಗದಲ್ಲಿ ಪಿಎಫ್ಐ ರ್ಯಾಲಿ ಸಂದರ್ಭ ನಡೆದ ಗಲಭೆಗೆ ಸಂಬಂಧಿಸಿ ಶನಿವಾರ ಕೋಡಿಯ ಹನೀಫನನ್ನು ಬಂಧಿಸಿದ್ದ ಪೊಲೀಸರು ಇದೀಗ ಮತ್ತೆ ನಾಲ್ವರನ್ನು ವಶಕ್ಕೆ ಪಡೆದುಕೊಂಡಿರುವ ಶಿವಮೊಗ್ಗ ಪೊಲೀಸರು ಸೋಮವಾರ ಸಂಜೆ ವಿಚಾರಣೆಗಾಗಿ ತೀರ್ಥಹಳ್ಳಿಗೆ ಕರೆದೊಯ್ದಿದ್ದಾರೆ. ಕೋಡಿ ನಿವಾಸಿಗಳಾದ ಅರ್ಷದ್ ಅಹ್ಮದ್, ಆಸಿಬ್, ನಿಯಾಲ್ ಹಾಗೂ ಮಯ್ಯದಿ ಎಂಬುವರೇ ಪೊಲೀಸರ ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳಲಾದ ವ್ಯಕ್ತಿಗಳೆಂದು ತಿಳಿದುಬಂದಿದೆ.
ಶನಿವಾರ ಕೋಡಿ ಕಿನಾರಾ ಸಮೀಪದ ನಿವಾಸಿ ಹನೀಫ್ ಕೋಡಿಯನ್ನು ಶಿವಮೊಗ್ಗ ಪೊಲೀಸರು ಕುಂದಾಪುರ ಪೊಲೀಸರ ಸಹಕಾರದೊಂದಿಗೆ ಬಂಧಿಸಿ ವಿಚಾತಣೆಗೊಳಪಡಿಸಿದ್ದು, ವಿಚಾರಣೆ ಸಂದರ್ಭ ಈ ನಾಲ್ವರ ಹೆಸರುಗಳನ್ನು ಆತ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಕುಂದಾಪುರಕ್ಕೆ ಆಗಮಿಸಿದ ಶಿವಮೊಗ್ಗ ಪೊಲೀಸರು ಸಂಜೆ ಸುಮಾರು ೪.೩೦ರ ವೇಳೆಗೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ತೀರ್ಥಹಳ್ಳಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಣ್ದೆಯೂ ಕೆಲವು ವಿಚಾರದಲ್ಲಿ ಆರೋಪಿಗಳು ಭಾಗಿಯಾಗಿದ್ದರೆನ್ನಲಾಗುತ್ತಿದ್ದು, ಮತೀಯ ಗಲಭೆಗಳಲ್ಲಿಯೂ ಆಸಿಬ್ ಎಂಬಾತನ ಪಾತ್ರವಿತ್ತೆನ್ನುವ ಮಾಹಿತಿಗಳೂ ಪೊಲೀಸರಿಗೆ ಲಭಿಸಿದೆ ಎನ್ನಲಾಗಿದ್ದು, ಇದೀಗ ಕೋಡಿಯ ಐವರು ಆರೋಪಿಗಳು ಪೋಲೀಸರ ವಶವಾಗಿದ್ದಾರೆ.