ಕರಾವಳಿ

ಉತ್ತಮ ಆರೋಗ್ಯಕ್ಕಾಗಿ ಅತ್ಯುತ್ತಮ ಸಲಹೆಗಳು

Pinterest LinkedIn Tumblr

ನಮ್ಮ ಇತ್ತೀಚಿನ ಜೀವನ ಶೈಲಿಯಿಂದಾಗಿರುವ ಆಹಾರದಲ್ಲಿನ ಬದಲಾವಣೆಯಿಂದ ಅರೋಗ್ಯ ಬಹಳಷ್ಟು ಹದಗೆಡುತ್ತಿದೆ. ಈ ಆಧುನಿಕ ಆಹಾರ ಪದ್ದತಿಯಿಂದ ಹಲವು ಸಮಸ್ಯೆ ಸಾಮಾನ್ಯವಾಗಿದೆ. ಇದಕ್ಕೆ ನಾವು ಬಹಳಷ್ಟು ವೈದ್ಯರ ಬಳಿ ಚಿಕಿತ್ಸೆಯನ್ನ ಪಡೆದರು ಆಹಾರ ಪದ್ದತಿಯಿಂದ ಪದೇ ಪದೇ ಈ ಸಮಸ್ಯೆ ಕಾಡುತ್ತಲೇ ಇರುತ್ತದೆ. ಈ ಸಮಸ್ಯೆಗೆ ಮನೆಯಲ್ಲಿಯೇ ಚಿಕಿತ್ಸೆಯನ್ನ ಪಡೆಯಬಹುದು. ಉತ್ತಮ ಆರೋಗ್ಯಕ್ಕಾಗಿ ಇಲ್ಲಿವೆ ಅತ್ಯುತ್ತಮ ಸಲಹೆಗಳು

ಬಿಕ್ಕಳಿಕೆ ಬರುವುದೇ : ಹುರುಳಿ ಕಷಾಯ ಸೇವಿಸಿರಿ.
ಕಫ ಬರುವುದೇ : ಶುಂಠಿ ಕಷಾಯ ಸೇವಿಸಿರಿ.
ಹೊಟ್ಟೆಯಲ್ಲಿ ಹರಳಾದರೇ : ಬಾಳೆದಿಂದಿನ ಪಲ್ಯ ಸೇವಿಸಿರಿ.
ತೊದಲು ನುಡಿಯುತ್ತಿದ್ದರೆ : ಮೃತ್ಯುಂಜಯ ಮಂತ್ರ ಹೇಳಿರಿ.
ಬಿಳಿ ಕೂದಲೇ : ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
ಮರೆವು ಬರುವುದೇ : ನಿತ್ಯ ಸೇವಿಸಿ ಜೇನು.
ಕೋಪ ಬರುವುದೇ : ಕಾಳು ಮೆಣಸು ಸೇವಿಸಿ.
ಮೂಲವ್ಯಾಧಿಯೇ : ನಿತ್ಯ ಸೇವಿಸಿ ಎಳ್ಳು.
ಮುಪ್ಪು ಬೇಡವೇ : ಗರಿಕೆ ರಸ ಸೇವಿಸಿ.
ನಿಶಕ್ತಿಯೇ : ದೇಶಿ ಆಕಳ ಹಾಲು ಸೇವಿಸಿ.
ಇರುಳುಗಣ್ಣು ಇದೆಯೇ : ತುಲಸಿ ರಸ ಕಣ್ಣಿಗೆ ಹಾಕಿ.
ಕುಳ್ಳಗಿರುವಿರೇ : ನಿತ್ಯ ಸೇವಿಸಿ ನಿಂಬೆ ಹಣ್ಣು.
ತೆಳ್ಳಗಿರುವಿರೆ : ನಿತ್ಯ ಸೇವಿಸಿ ಸೀತಾ ಫಲ.
ತೆಳ್ಳಗಾಗಬೇಕೇ : ನಿತ್ಯ ಸೇವಿಸಿ ಬಿಸಿ ನೀರು.
ಹಸಿವಿಲ್ಲವೇ : ನಿತ್ಯ ಸೇವಿಸಿ ಓಂ ಕಾಳು.
ತುಂಬಾ ಹಸಿವೇ : ಸೇವಿಸಿ ಹಸಿ ಶೇಂಗಾ.
ಬಾಯಾರಿಕೆಯೇ : ಸೇವಿಸಿ ತುಳಸಿ.
ಬಾಯಾರಿಕೆ ಇಲ್ಲವೇ : ಸೇವಿಸಿ ಬೆಲ್ಲ.
ಸಕ್ಕರೆ ಕಾಯಿಲೆಯೇ : ಬಿಡಿ ಸಕ್ಕರೆ, ಸೇವಿಸಿ ರಾಗಿ.
ಸಾರಾಯಿ ದಾಸರೇ : ಗೋಸೇವೆ ಮಾಡಿ,ಗೋಮೂತ್ರ ಸೇವಿಸಿ.
ರಕ್ತ ಹೀನತೆಯೇ : ನಿತ್ಯ ಸೇವಿಸಿ ಪಾಲಕ್ ಸೊಪ್ಪು.
ತಲೆ ಸುತ್ತುವುದೇ : ಬೆಳ್ಳುಳ್ಳಿ ಕಷಾಯ ಸೇವಿಸಿ.
ದೃಷ್ಟಿ ದೋಷವೇ : ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ,ನಿತ್ಯ ಸೇವಿಸಿ ಕಿರುಕಸಾಲಿ.
ಬಂಜೆತನವೇ : ಔದುಂಬರ ಚಕ್ಕೆ ಕಷಾಯ ಸೇವಿಸಿ.
ಭಯವೇ : ಗೋಮೂತ್ರ ಸೇವಿಸಿ.
ಸ್ವಪ್ನ ದೋಷವೇ : ತುಳಸಿ ಕಷಾಯ ಸೇವಿಸಿ.
ಅಲರ್ಜಿ ಇದೆಯೇ : ಅಮೃತ ಬಳ್ಳಿ ಕಷಾಯ ಸೇವಿಸಿ.
ಹೃದಯ ದೌರ್ಬಲವೇ : ಸೋರೆಕಾಯಿ ರಸ ಸೇವಿಸಿ.
ರಕ್ತ ದೋಷವೇ : ಕೇಸರಿ ಹಾಲು ಸೇವಿಸಿ.
ದುರ್ಗಂಧವೇ : ಹೆಸರು ಹಿಟ್ಟು ಸ್ನಾನ ಮಾಡಿ.
ಕೋಳಿ ಜ್ವರಕ್ಕೆ : ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
ಕಾಲಲ್ಲಿ ಆಣಿ ಇದೆಯೇ : ಉತ್ತರಾಣಿ ಸೊಪ್ಪು ಕಟ್ಟಿರಿ.
ಮೊಣಕಾಲು ನೋವು : ನಿತ್ಯ ಮಾಡಿ ವಜ್ರಾಸನ.
ಸಂಕಟ ಆಗುವುದೇ : ಎಳನೀರು ಸೇವಿಸಿ.
ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ : ನಿತ್ಯ ಕೊಡಿ ಜೇನು.
ಜಲಶುದ್ಧಿ ಮಾಡಬೇಕೇ : ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ,ಅದರಲ್ಲಿ ತುಳಸಿ ಎಲೆ ಹಾಕಿರಿ.
ವಾಂತಿಯಾಗುವುದೇ : ಎಳನೀರು-ಜೇನು ಸೇವಿಸಿ.
ಎದೆಹಾಲಿನ ಕೊರತೆಯೇ : ನಿತ್ಯ ಸೇವಿಸಿ ಎಳ್ಳು.
ಎಲುಬುಗಳ ನೋವೇ : ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
ಭೇದಿ ತುಂಬಾ ಆಗುವುದೇ : ಅನ್ನ ಮಜ್ಜಿಗೆ ಊಟ ಮಾಡಿ.
ಜಿಗುಪ್ಸೆ ಆಗಿದೆಯೇ : ಪ್ರಾಣಾಯಾಮ ಮಾಡಿ.
ಹಲ್ಲು ಸಡಿಲವೇ : ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
ಕಾಮಾಲೆ ರೋಗವೇ : ನಿತ್ಯ ಮೊಸರು ಸೇವಿಸಿ.
ಉಗುರು ಸುತ್ತು ಇದೆಯೇ : ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.

Comments are closed.