ಕರಾವಳಿ

ಕೊಲ್ಲೂರು ಹೆದ್ದಾರಿಯಲ್ಲಿ ಇಕೋ ಕಾರಿಗೆ ಆಕಸ್ಮಿಕ ಬೆಂಕಿ: ಧಗಧಗ ಹೊತ್ತಿ ಉರಿದ ಕಾರು(Video)

Pinterest LinkedIn Tumblr

ಕುಂದಾಪುರ: ರಸ್ತೆ ಬದಿಯಲ್ಲಿ ನಿಲ್ಲಿಸಿದ ಮಾರುತಿ ಇಕೋ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕಾರು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಹತ್ತಿ ಉರಿದು ಸುಟ್ಟು ಕರಕಲಾದ ಘಟನೆ ಫೆ.22 ಶನಿವಾರ ಮಧ್ಯಾಹ್ನ ಉಡುಪಿ ಜಿಲ್ಲೆಯ ಕೊಲ್ಲೂರು-ಹೆಮ್ಮಾಡಿ ರಸ್ತೆಯ ಚಿತ್ತೂರು ಸಮೀಪದಲ್ಲಿ ನಡೆದಿದೆ.

ಚಿತ್ತೂರು ನಿವಾಸಿ ಗೋಪಾಲ್ ಆಚಾರ್ ಎನ್ನುವರು ರಸ್ತೆ ಸಮೀಪ ಕಾರನ್ನು ನಿಲ್ಲಿಸಿ ಮನೆಗೆ ತೆರಳಿದ್ದು ಈ ವೇಳೆ ಆಕಸ್ಮಿಕವಾಗಿ ಕಾರಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಅಲ್ಲಿಯೇ ನಡೆಯುತ್ತಿದ್ದ ರಸ್ತೆ ಕಾಮಗಾರಿವರ ನೀರಿನ ಟ್ಯಾಂಕರ್ ತರಿಸಿಕೊಂಡು ಬೆಂಕಿ ನಂದಿಸುವ ಯತ್ನ ಮಾಡಿದರು. ಅಷ್ಟರಲ್ಲಾಗಲೇ ಕುಂದಾಪುರ ಅಹ್ನಿಶಾಮಕ ದಳವು ಸ್ಥಳಕ್ಕಾಗಮಿಸಿದ್ದು ಬೆಂಕಿ ತೀವ್ರತೆ ಜಾಸ್ಥಿಯಿದ್ದ ಕಾರಣ ಕಾರು ಭಾಗಶಃ ಬೆಂಕಿಗೆ ಆಹುತಿಯಾಗಿತ್ತು. ಅಗ್ನಿಶಾಮಕ ಸಿಬ್ಬಂದಿಗಳು ಸಂಪೂರ್ಣ ಬೆಂಕಿ ನಂದಿಸಿದ್ದಾರೆ.

Comments are closed.