ಕರ್ನಾಟಕ

‘ಟಗರು’ ನಿರ್ದೇಶಕ ಸೂರಿಗೆ ಶಿವಣ್ಣ ವಿಚಾರದಲ್ಲಿ ಹುಚ್ಚ ವೆಂಕಟ್ ಅವಾಜ್ ಹಾಕಿದ್ದು ನೋಡಿ..!

Pinterest LinkedIn Tumblr

ಬೆಂಗಳೂರು: ಹ್ಯಾಟ್ರಿಕ್ ಹೀರೊ, ಸೆಂಚುರಿ ಸ್ಟಾರ್ ಮೊದಲಾಗಿ ಹೆಸರು ಮಾಡಿದ ಶಿವರಾಜ್ ಕುಮಾರ್ ಅಭಿನಯದ `ಟಗರು’ ಚಿತ್ರ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಚಿತ್ರದಲ್ಲಿ ಶಿವಣ್ಣನ ಬಗ್ಗೆ ವಿಲನ್ ಪಾತ್ರದಲ್ಲಿರೋ ಮಂದಿ ಬಾಯಿಗೆ ಬಂದ ಹಾಗೇ ಮಾತನಾಡಿ ಅವರ ‘ಇಮೇಜ್’ ಹಾಳು ಮಾಡುವ ಪ್ರಯತ್ನ ಮಾಡಿದ್ದಾರೇಂದು ಇತ್ತೀಚೆಗೆ ಶಿವಣ್ಣ ಅಭಿಮಾನಿಗಳು ಗರಂ ಆಗಿದ್ದರು. ಈ ನಡುವೆ ಚಿತ್ರದ ನಿರ್ದೇಶಕರ ವಿರುದ್ಧ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ. ಹುಚ್ಚಾ ವೆಂಕಟ್ ಡೈರೆಕ್ಟರ್ ಸೂರಿಗೆ ಎಚ್ಚರಿಕೆ ನೀಡಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿನಿಮಾದಲ್ಲಿ ವಿಲನ್ ಗಳು ನಾಯಕ ನಟ ಶಿವರಾಜ್ ಕುಮಾರ್ ಅವರಿಗೆ ಅವಾಚ್ಯ ಪದಗಳಿಂದ ಬೈಯ್ಯುವ ಸನ್ನಿವೇಶಗಳಿವೆ. ಇದರಿಂದ ಶಿವಣ್ಣ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಹುಚ್ಚ ವೆಂಕಟ್ ಕೂಡಾ ರೊಚ್ಚಿಗೆದ್ದಿದ್ದು ತನ್ನದೇ ಶೈಲಿಯಲ್ಲಿ ಅವಾಜ್ ಹಾಕಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣನಿಗೆ ಉಪಯೋಗಿಸಿದ ಅವಾಚ್ಯ ಪದಗಳನ್ನು ಮ್ಯೂಟ್ ಮಾಡಬೇಕು. ಇಲ್ಲದಿದ್ದರೆ ನನ್ನ ಹುಡುಗರು ನಿನ್ನನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಡೈಲಾಗ್‍ಗಳನ್ನು ನೀನು ಕೂಡಲೇ ಮ್ಯೂಟ್ ಮಾಡದಿದ್ದರೆ ಮುಂದಾಗುವ ಪರಿಣಾಮಗಳಿಗೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಶಿವರಾಜ್‍ಕುಮಾರ್ ಎಂದರೆ ನನಗೆ ಇಷ್ಟ. ಇಷ್ಟಪಡುವವರಿಗೆ ಪ್ರಾಣ ಬೇಕಾದ್ರೂ ಕೊಡುತ್ತೇನೆ ಎಂದು ತಿಳಿಸಿದ್ದಾರೆ.

ವಿಲನ್‍ಗಳು ಶಿವಣ್ಣನಿಗೆ ಹೇಳಿದ ಡೈಲಾಗ್ ಕೇಳಿ ಹುಚ್ಚ ವೆಂಕಟ್ ನಿರ್ದೇಶಕ ಸೂರಿ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments are closed.