ಮನೋರಂಜನೆ

ಪ್ರತಾಪ್​ ಸಿಂಹ ವಿರುದ್ಧ 1 ರೂ. ಮಾನನಷ್ಟ ಖಟ್ಲೆ ಹೂಡಿದ ಪ್ರಕಾಶ್ ರೈ

Pinterest LinkedIn Tumblr


ಮೈಸೂರು: ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಅವಹೇಳನಕಾರಿ ಪೋಸ್ಟ್ ವಿರುದ್ಧ ನಟ ಪ್ರಕಾಶ್​ ರೈ ಕೇವಲ 1 ರೂಪಾಯಿ ಪರಿಹಾರ ಕೇಳಿ ಮಂಗಳವಾರ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇಲ್ಲಿನ ನಾಲ್ಕನೇ ಜೆಎಂಎಫ್​ಸಿ ನ್ಯಾಯಾಧೀಶರಾದ ಅಮೃತಾ ಅವರಿಗೆ ಪ್ರತಾಪ್​ ಸಿಂಹ ವಿರುದ್ಧ ಅರ್ಜಿ ಸಲ್ಲಿಸಿರುವ ರೈ, ಐಪಿಸಿ ಸೆಕ್ಷನ್ 499 (ಮಾನನಷ್ಟ), 503 (ಜೀವ ಬೇದರಿಕೆ) 500(ಮಾನನಷ್ಟಕ್ಕಾಗಿ ಶಿಕ್ಷೆ) ಎಂಬ ಮೂರು ಸೆಕ್ಷನ್​ಗಳ ಅಡಿಯಲ್ಲಿ ದೂರು ನೀಡಿದ್ದಾರೆ. ವಕೀಲ ಎಂ.ಮಹದೇವಸ್ವಾಮಿ ಅವರು ಪ್ರಕಾಶ್​ ರೈ ಪರ ವಕಾಲತ್ತು ವಹಿಸಲಿದ್ದಾರೆ.

ಮಗ ಮೃತಪಟ್ಟಿದ್ದರೂ ಡ್ಯಾನ್ಸರ್ ಹಿಂದೆ ಓಡಿ ಹೋದವರಿಗೆ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ್​ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದರ ವಿರುದ್ಧ ಪ್ರಕಾಶ್​ ರೈ ಈ ಹಿಂದೆ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ಆದರೆ, ಪ್ರತಾಪ್​ ಸಿಂಹ ನೋಟಿಸ್​ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಮಹದೇವಸ್ವಾಮಿ ತಿಳಿಸಿದ್ದಾರೆ.

Comments are closed.