https://youtu.be/Hy54ZdAKOho
ಮುಂಬೈ: ನಾಯಿಯೊಂದು ತನ್ನ ಕಾರಿನ ಟಯರ್ ಮೇಲೆ ಮೂತ್ರ ವಿಸರ್ಜನೆ ಮಾಡಿತೆಂದು, ಬಡಪಾಯಿ ಬೀದಿ ನಾಯಿಯ ಮೇಲೇ ಮಾಲಿಕನೊಬ್ಬ ಕಾರ ಚಲಾಯಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ನಾಯಿಯೊಂದಿಗೆ ಅಮಾನಿಯವಾಗಿ ವರ್ತಿಸಿದಾತ ಕಸ್ಟಮರ್ ಸರ್ವಿಸ್ ಎಕ್ಸಿಕ್ಯುಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೌರಭ್ ದುಕಂಡೆ ಎಂದು ತಿಳಿದು ಬಂದಿದೆ. ಆ ಪ್ರದೇಶದಲ್ಲಿ ಎಲ್ಲರ ನೆಚ್ಚಿನ ನಾಯಿ ಎನಿಸಿಕೊಂಡಿದ್ದ ಬಾಂಡ್ಯಾ ಹೆಸರಿನ ಬೀದಿ ನಾಯಿ ಸೌರಭ್’ನ ಕಾರಿನ ಟಯರ್ ಮೇಲೆ ಮೂತ್ರ ವಿಸರ್ಜನೆ ಮಾಡಿತ್ತು. ಇದರಿಂದ ಕುಪಿತಗೊಂಡ ಸೌರಭ್ ಸೇಡು ತೀರಿಸಲು ಬೀದಿ ಬದಿಯಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಚಲಾಯಿಸಿದ್ದಾನೆ.
ಈತನ ಈ ಸೇಡಿನ ಕೃತ್ಯದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ನಾಯಿಯನ್ನು ಸ್ಥಳೀಯರು ಆ ಕೂಡಲೇ ಪಶು ಚಿಕಿತ್ಸಾಲಯಕ್ಕೆ ದಾಖಲಿಸಿದ್ದಾರೆ. ಸೌರಭ್’ನ ಈ ಅಮಾನವೀಯತೆಯನ್ನು ಸಿಸಿಟಿವಿ ದೃಶ್ಯಗಳ ಸಮೇತವಾಗಿ ಇಲ್ಲಿನ ಸ್ಥಳೀಯನೊಬ್ಬ ಫೇಸ್’ಬುಕ್’ನಲ್ಲಿ ಅಪ್’ಲೋಡ್ ಮಾಡಿದ್ದಾನೆ. ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಸೌರಭ್’ನ ಅಮಾನವೀಯತೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕಾರು ಚಲಾಯಿಸಿದ ಸೌರಭ್’ನನ್ನು ಬಂಧಿಸಿದ್ದಾರೆ.
Comments are closed.