ಕರಾವಳಿ

ಉಡುಪಿ ಜಿಲ್ಲಾ ಪೊಲೀಸರ ಕಾರ್ಯಕ್ಷಮತೆ ಶ್ಲಾಘಿಸಿ ಬಹುಮಾನ ಘೋಷಿಸಿದ ಪಶ್ಚಿಮ ವಲಯ ಐಜಿಪಿ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಇಲಾಖಾ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಾಾದ ದೇವಜ್ಯೋತಿ ರೇ ಅವರು ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

(ಐಜಿಪಿ ದೇವಜ್ಯೋತಿ ರೇ)

ಸೆನ್ ಠಾಣೆಯ ಅಧಿಕಾರಿ, ಸಿಬ್ಬಂದಿಗೆ…: ವಿದೇಶದಲ್ಲಿ ಉದ್ಯೋಗದಲ್ಲಿದ್ದ ಕೋಟೇಶ್ವರದ ನಿವಾಸಿ ಹರೀಶ್ ಬಂಗೇರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಸೌದಿ ಅರೇಬಿಯಾದ ರಾಜನ ಬಗ್ಗೆ ಹಾಗೂ ಮುಸ್ಲಿಂ ಧರ್ಮದ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಸರಿಸಿ, ಸೌದಿ ಅರೇಬಿಯಾದಲ್ಲಿ ಹರೀಶ್ ಬಂಗೇರರವರ ಬಂಧನಕ್ಕೆ ಕಾರಣರಾದವರ ವಿರುದ್ಧ ಉಡುಪಿ ಜಿಲ್ಲೆಯ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡು, ಸಮರ್ಪಕವಾಗಿ ತನಿಖೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ತಂಡದಲ್ಲಿ ಈ ಹಿಂದೆ ಸೆನ್ ಅಪರಾಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಸೀತಾರಾಮ ಪಿ, ಹಾಗೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್, ಪಿಎಸ್ಐ ನಾರಾಯಣ, ಪಿಎಸ್.ಐ. ಲಕ್ಷ್ಮಣ ಹಾಗೂ ಸಿಬ್ಬಂದಿಗಳಾದ ಶ್ರೀಧರ್, ರಾಘವೇಂದ್ರ, ಕೃಷ್ಣಪ್ರಸಾದ್, ಜೀವನ್ ಹಾಗೂ ಪ್ರವೀಣ್‌.

ಕಿಶನ್ ಹೆಗ್ಡೆ ಕೊಲೆ ಪ್ರಕರಣದ ಬಗ್ಗೆ…
2020ರ ಸೆ.24ರಂದು ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನದ ಬಳಿ ನಡೆದ ಕಿಶನ್ ಹೆಗ್ಡೆ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ 9 ಜನರನ್ನು ಶೀಘ್ರವಾಗಿ ಬಂಧಿಸಿದ ತಂಡದಲ್ಲಿ ಬ್ರಹ್ಮಾವರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಕಾಪು ವೃತ್ತ ನಿರೀಕ್ಷ ಮಹೇಶ್ ಪ್ರಸಾದ್, ಉಡುಪಿ ವೃತ್ತದ ವೃತ್ತ ನಿರೀಕ್ಷ ಮಂಜುನಾಥ, ಉಡುಪಿ ಡಿಸಿಐಬಿ ನಿರೀಕ್ಷಕ ಮಂಜಪ್ಪ ಡಿ.ಆರ್., ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ, ಆಗಿನ ಬ್ರಹ್ಮಾವರ ಠಾಣೆಯ ಪಿಎಸ್ಐ ರಾಘವೆಂದ್ರ ಸಿ., ಕೋಟ ಠಾಣೆಯ ಪಿಎಸ್ಐ ಸಂತೋಷ್ ಬಿ.ಪಿ., ಎ.ಎಸ್.ಐ. ಕೃಷ್ಣಪ್ಪ, ಡಿಸಿಐಬಿಯ ಎ.ಎಸ್.ಐ. ರವಿಚಂದ್ರ, ಹಾಗೂ ಡಿಸಿಐಬಿಯ ಸಿಬ್ಬಂದಿಗಳಾದ ರಾಮು ಹೆಗ್ಡೆ, ರಾಘವೆಂದ್ರ, ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿಯವರಾದ ಶ್ರೀ ವಾಸುದೇವ, ಗಣೇಶ್, ಪ್ರದೀಪ್ ನಾಯಕ್ ಹಾಗೂ ಚಾಲಕ ಶೇಖರ, ಬ್ರಹ್ಮಾವರ ಠಾಣೆಯ ಸಿಬ್ಬಂದಿಯವರಾದ ದಿಲೀಪ್, ಅಣ್ಣಪ್ಪ ಮೊಗವೀರ ಮತ್ತು ರವೀಂದ್ರ, ಹಿರಿಯಡ್ಕ ಠಾಣೆಯ ಸಿಬ್ಬಂದಿ ಇಂದ್ರೇಶ್ ಇರುತ್ತಾರೆ.

(ಎಸ್ಪಿ ವಿಷ್ಣುವರ್ಧನ್)

ಮಾದಕ ದ್ರವ್ಯ ಕೇಸಿನಲ್ಲಿ…
ಇತ್ತೀಚೆಗೆ ಭಾರೀ ಸಂಚಲನ ಮೂಡಿಸಿದ್ದ, ಮಣಿಪಾಲ ಠಾಣೆಯಲ್ಲಿ ದಾಖಲಾದ ಮಾದಕ ದ್ರವ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಅತ್ಯಂತ ಚಾಣಾಕ್ಷತನದಿಂದ ಆರೋಪಿಗಳನ್ನಯ ಪತ್ತೆ ಹಚ್ಚಿದ್ದಲ್ಲದೆ ಅವರನ್ನು ಬಂಧಿಸಿ ಅಪಾರ ಪ್ರಮಾಣದ ಭಾರೀ ಮೌಲ್ಯದ ಮಾದಕ ದ್ರವ್ಯ ಪದಾರ್ಥಗಳನ್ನು ವಶಪಡಿಸಿಕೊಂಡ ತಂಡದ ನೇತೃತ್ವ ವಹಿಸಿದ ಅಧಿಕಾರಿಗಳಾದ ಮಣಿಪಾಲ ಇನ್ಸ್‌ಪೆಕ್ಟರ್ ಮಂಜುನಾಥ ಎಂ., ಮಣಿಪಾಲ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಜಶೇಖರ ವಂದಲಿರವರು ಪ್ರಶಂಸನಾ ಪತ್ರ ಹಾಗೂ ನಗದು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಹಳೆ ಪ್ರಕರಣಗಳ ತನಿಕೆ ಚುರುಕು  ಪೂರ್ಣಗೊಳಿಸಿದ್ದಕ್ಕೆ….
2019 ಮತ್ತು ಅದಕ್ಕೂ ಹಿಂದೆ ವರದಿಯಾಗಿರುವ ಪ್ರಕರಣಗಳ ತನಿಖೆಯನ್ನು ಶೀಘೃವಾಗಿ ಪೂರ್ಣಗೊಳಿಸಿ, ತನಿಖೆಯಲ್ಲಿರುವ ಪ್ರಕರಣಗಳ ಸಂಖ್ಯೆಯನ್ನು ಇಳಿಮುಖ ಮಾಡುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಿದ ಮಣಿಪಾಲ‌ ಸಿಪಿಐ ಮಂಜುನಾಥ ಎಂ. ಹಾಗೂ ಮಣಿಪಾಲ ಪೊಲೀಸ್ ಠಾಣೆ ಉಪನಿರೀಕ್ಷಕ ರಾಜಶೇಖರ ವಂದಲಿ, ಮಣಿಪಾಲ ಠಾಣೆ, ಕಾಪು ಪಿಎಸ್ಐ ರಾಜಶೇಖರ ಬಿ. ಸಾಗನೂರು, ಬೈಂದೂರು ಪಿಎಸ್ಐ ಸಂಗೀತ, ಕೋಟ ಪಿಎಸ್ಐ ಸಂತೋಷ್ ಬಿ.ಪಿ, ಉಡುಪಿ ನಗರ ಠಾಣೆ ಪಿಎಸ್ಐ ಸಕ್ತಿವೇಲು, ಮಣಿಪಾಲ ಠಾಣೆ ಎಎಸ್ಐ ದಿವಾಕರ ಶರ್ಮ, ಬೈಂದೂರು ಠಾಣೆ ಎಎಸ್ಐ ಮಂಜುನಾಥ, ಉಡುಪಿ ನಗರ ಠಾಣೆಯ ಸಿಬ್ಬಂದಿ ರಿಯಾಜ್ ಅಹ್ಮದ್ ಮತ್ತು ವಿಶ್ವನಾಥ, ಬೈಂದೂರು ಠಾಣೆಯ ನಾಗರಾಜ್, ಕೋಟಾ ಠಾಣೆಯ ಗಣೇಶ್ ಮತ್ತು ಕೃಷ್ಣ, ಮಣಿಪಾಲ ಠಾಣೆಯ ಆದರ್ಶ ಹಾಗೂ ಕಾಪು ಠಾಣೆಯ ಮಹಾಬಲ ಶೆಟ್ಟಿಗಾರ್ ಮತ್ತು ಅರುಣ್ ಕುಮಾರ್‌ರವರು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

2020ನೇ ಸಾಲಿನಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 67 ಪ್ರಕರಣಗಳನ್ನು ಇತ್ಯರ್ಥಪಡಿಸಿ, ನ್ಯಾಯಾಂಗ ವಿಚಾರಣೆಯ ಪ್ರಕರಣಗಳ ಸಂಖ್ಯೆಯನ್ನು ಇಳಿಮುಖ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ ತಂಡದಲ್ಲಿ ಬೈಂದೂರು ಠಾಣೆ ಪಿಎಸ್ಐ ಸಂಗೀತ, ಶಂಕರನಾರಾಯಣ ಪಿಎಸ್ಐ ಶ್ರೀಧರ ನಾಯ್ಕ, ಪಡುಬಿದ್ರೆ ಠಾಣೆ ಪಿಎಸ್ಐ ದಿಲೀಪ್, ಕುಂದಾಪುರ ಪಿಎಸ್ಐ ಸದಾಶಿವ ಗವರೋಜಿ, ಬ್ರಹ್ಮಾವರ ಠಾಣೆಯ ಹಿಂದಿನ, ಪ್ರಸ್ತುತ ಕಾಪು ಪಿಎಸ್ಐ ರಾಘವೇಂದ್ರ, ಉಡುಪಿ ಸಂಚಾರ ಠಾಣೆ ಪಿಎಸ್ಐ ಅಬ್ದುಲ್ ಖಾದರ್ ಅವರು ಭಾಜನರಾಗಿದ್ದಾರೆ.

ಜನಸ್ನೇಹಿ ಪೊಲೀಸ್ ವ್ಯವಸ್ಥೆಯಲ್ಲಿ ಬೀಟ್ ಸಿಬ್ಬಂದಿಗಳಿಗೆ….
ಜನಸ್ನೇಹಿ ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕಹೊಂದಿ, ಅಲ್ಲಿನ ಆಗುಹೋಗುಗಳ ಬಗ್ಗೆ ಗಮನಹರಿಸಿ, ಬೀಟ್ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸಿಬ್ಬಂದಿಗಳಾದ ಕೊಲ್ಲೂರು ಠಾಣೆಯ ನವೀನ್ ದೇವಾಡಿ, ಮಲ್ಪೆಯ ರವಿರಾಜ್, ಪಡುಬಿದ್ರೆಯ ಬಸಪ್ಪ, ಶಿರ್ವಾದ ಅಂದಪ್ಪ ಹಾಗೂ ಕುಂದಾಪುರ ಠಾಣೆಯ ಪ್ರಸನ್ನ ಅವರು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಉಡುಪಿ ಎಸ್ಪಿ ವಿಷ್ಣುವರ್ಧನ್ ಶ್ಲಾಘನೆ…
ಪ್ರಶಸ್ತಿ ಗಳಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ವಿಷ್ಣುವರ್ಧನ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಅವರು ಶ್ಲಾಘಿಸಿದ್ದಾರೆ. ಅಲ್ಲದೇ ಪ್ರಂಶಸನಾ ಪತ್ರ ಹಾಗೂ ನಗದು ಪುರಸ್ಕಾರ ಘೋಷಿಸಿದ ಪೊಲೀಸ್ ಮಹಾನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರು ಅವರಿಗೆ ಪೊಲೀಸ್ ವರಿಷ್ಟಾಧಿಕಾರಿಯವರು ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ ಪ್ರಶಂಸನಾ ಪತ್ರ ಹಾಗೂ ನಗದು ಪುರಸ್ಕಾರ ಪಡಕೊಂಡ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಇದೇ ರೀತಿ ತಮ್ಮ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಂಡು, ಇನ್ನೂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಲು ಕಿವಿಮಾತು ಹೇಳಿದರು. ಹಾಗೂ ಜಿಲ್ಲೆಯ ಇತರ ಅಧಿಕಾರಿ, ಸಿಬ್ಬಂದಿಗಳೂ ಕೂಡ ಇದೇ ರೀತಿ ತಮ್ಮ ಕಾರ್ಯದಕ್ಷತೆಯನ್ನು ನಿರ್ವಹಿಸಿ, ಮೇಲಾಧಿಕಾರಿಯವರಿಂದ ಪ್ರಶಂಸನಾ ಪತ್ರ ಹಾಗೂ ನಗದು ಪುರಸ್ಕಾರ ಪಡೆಯುವಂತಾಗಲಿ ಎಂದು ಹಾರೈಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.