ಕರಾವಳಿ

ಜಪ್ಪಿನಮೊಗರು ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು : ಜಪ್ಪಿನಮೊಗರು ವಾರ್ಡಿನ ಹೊಯ್ಗೆ ರಾಶಿ ಎಂಬಲ್ಲಿ ತೋಡಿನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಜಪ್ಪಿನಮೊಗರು ವಾರ್ಡಿನ ಹೊಯ್ಗೆರಾಶಿಯಲ್ಲಿ ತೋಡಿನ ತಡೆಗೋಡೆ ಅಭಿವೃದ್ಧಿಪಡಿಸಲು 20 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ. ಈ ಕಾಮಗಾರಿಯ ಗುದ್ದಲಿಪೂಜೆಯು ಇಲ್ಲಿನ ಸಾರ್ವಜನಿಕರ ಉಪಸ್ಥಿತಿಯಲ್ಲಿ ನೆರವೇರಿಸಲಾಗಿದೆ ಎಂದು ಹೇಳಿದ್ದಾರೆ.

ಮಳೆಗಾಲದ‌ ಸಂಧರ್ಭದಲ್ಲಿ ಈ ಪ್ರದೇಶದ ತಗ್ಗು ಪ್ರದೇಶಗಳಿಗೆ ತೋಡಿನಲ್ಲಿ ಹರಿಯುವ ಮಳೆ ನೀರು ನುಗ್ಗುವ ಸಮಸ್ಯೆಯಿದೆ. ಹಾಗೂ ತೋಡಿನ ತಡೆಗೋಡೆ ಕುಸಿಯುವ ಭೀತಿ ಇತ್ತು. ಈ ಕುರಿತು ಇಲ್ಲಿನ ಸ್ಥಳೀಯ ಮನಪಾ ಸದಸ್ಯರು ಹಾಗೂ ಮುಖಂಡರು ತಡೆಗೋಡೆಗೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದರು. ಆ ಪ್ರಕಾರ ಅನುದಾನ ಬಿಡುಗಡೆಗೊಳಿಸಲಾಗಿದ್ದು ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ವೀಣಾ ಮಂಗಲ, ದಿವಾಕರ್ ಪಾಂಡೇಶ್ವರ, ಬಿಜೆಪಿ ಮುಖಂಡರಾದ ಸುರೇಂದ್ರ, ಪುಷ್ಪರಾಜ್,ಸಂದೇಶ್, ನಾಗೇಶ್, ದೀಪಕ್, ಪ್ರಾಣೇಶ್, ಮಧು, ಸವಿತ, ಸುರೇಶ್,ರಾಜೇಶ್ ಸಪಲ್ಯ,ಶ್ಯಾಮ್ ಪ್ರಸಾದ್,ನಾಗೇಶ್, ಪ್ರವೀಣ್ ಕುಮಾರ್, ಶುಭಕರ್ ಶೆಟ್ಟಿ, ಸುಜಾತ, ಶೀತಲ್,ಕಿಶೋರ್, ರಾಜೇಂದ್ರ, ಮೀರಾ ಗಟ್ಟಿ, ರಜಿನಿ, ಸಿಪ್ರಿನ್, ರಹೀಮ್ ಕಡೆಕಾರ್, ಜನಾರ್ದನ್ ಹಾಗೂ ಸ್ಥಳೀಯರಾದ ರೂಪೇಶ್, ದಿನಪ್ರಭ, ಪ್ರೇಮಾ ಶೆಟ್ಟಿ, ದಾಮೋದರ ಶೆಟ್ಟಿ, ಲತಾ ಶೆಟ್ಟಿ, ಆಂಟೋನಿ ಡಿಸೋಜ, ರೂಪಾ ಕೊಟ್ಟಾರಿ, ಪ್ರತಿಕಾ ಸೀಮಾ ಮುಂತಾದವರು ಉಪಸ್ಥಿತರಿದ್ದರು.

Comments are closed.