ಕರಾವಳಿ

ಭವ್ಯ ಶೋಭಾಯಾತ್ರೆಯೊಂದಿಗೆ ಮಂಗಳೂರು ಗಣೇಶೋತ್ಸವ ಸಂಪನ್ನ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.09 : ಹಿಂದೂ ಯುವ ಸೇನೆ ಅಶ್ರಯದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಸೆಪ್ಟಂಬರ್ 2ರಿಂದ 8ರವರೆಗೆ ಪೂಜಿಸಲ್ಪಟ್ಟ 27ನೇ ವರ್ಷದ ಮಂಗಳೂರು ಗಣೇಶೋತ್ಸವದ ಭವ್ಯ ಶೋಭಾಯಾತ್ರೆ ರವಿವಾರ ಸಂಜೆ ನಡೆಯಿತು.

ಕೇಂದ್ರ ಮೈದಾನದಿಂದ ಹೊರಟ ಶ್ರೀ ದೇವರ ವಿಗ್ರಹದ ಭವ್ಯ ಶೋಭಾಯಾತ್ರೆಯು ಆರ್‌ಟಿಒ ವೃತ್ತ, ಟವರ್ ಕ್ಲಾಕ್, ಹಂಪನ್ ಕಟ್ಟ ಸಿಗ್ನಲ್ ವೃತ್ತ, ಕೆ‌ಎಸ್ ರಸ್ತೆ, ನವಭಾರತ ವೃತ, ದೊಂಗೆರೆಕೇರಿ, ಚಿತ್ರ ಟಾಕೀಸ್ ಜಂಕ್ಷನ್, ರಥಬೀದಿ ರಸ್ತೆಯಾಗಿ ಸಾಗಿ ಸೋಮವಾರ ನಸುಕಿನ ವೇಳೆ ನಗರದ ರಥಭೀದಿಯ ಶ್ರೀ ಮಹಮ್ಮಾಯಿ ಕೆರೆಯಲ್ಲಿ ಜಲಸ್ಥಂಭನಗೊಳಿಸಲಾಯಿತು.

ಹಲವಾರು ಸ್ತಬ್ದ ಚಿತ್ರ, ವೇಷಗಳ ಟ್ಯಾಬ್ಲೋಗಳ ಸಹಿತಾ ಹೊರಟ ಈ ಅದ್ಧೂರಿ ಶೋಭಾಯಾತ್ರೆಯಲ್ಲಿ ಹಿಂದೂ ಯುವ ಸೇನೆಯ ಪ್ರಮುಖರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡರು.

Comments are closed.