ಕರಾವಳಿ

ಮಂಗಳೂರಿನಲ್ಲಿ ಮಹಿಳೆಯ ಬರ್ಬರ ಕೊಲೆ : ರುಂಡ ಒಂದು ಕಡೆ ದೇಹದ ವಿವಿಧ ಭಾಗಗಳು ಇನ್ನೊಂದೆಡೆ ಪತ್ತೆ

Pinterest LinkedIn Tumblr

ಮಂಗಳೂರು, ಮೇ.12: ಮಹಿಳೆಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿ ನಗರದ ಕದ್ರಿ ಪಾರ್ಕ್ ಬಳಿ ಹಾಗೂ ನಂದಿ ಗುಡ್ಡೆಯಲ್ಲಿ ರುಂಡ ಹಾಗೂ ದೇಹದ ವಿವಿಧ ಭಾಗಗಳನ್ನು ಎಸೆದು ಹೋಗಿರುವ ಘಟನೆ ಇಂದು ನಡೆದಿದೆ.

ಬೈಕ್‌ನಲ್ಲಿ ಬಂದ‌ ವ್ಯಕ್ತಿಯೋರ್ವ ಕದ್ರಿ ಪಾರ್ಕ್ ಬಳಿಯ ಅಂಗಡಿಯಲ್ಲಿ ಹೆಲ್ಮೆಟ್ ಇರಿಸಿ ಹೋಗಿದ್ದು, ಅಂಗಡಿ‌ ಮಾಲಕ‌ ಪರಿಶೀಲಿಸಿದಾಗ ಸಮೀಪದದಲ್ಲಿ ಗೋಣಿ ಚೀಲದಲ್ಲಿ ಮಹಿಳೆಯ ಬೇರ್ಪಟ್ಟ ರುಂಡ ಪತ್ತೆಯಾಗಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ.

ನಂದಿಗುಡ್ಡ ಹಿಂದೂ ರುದ್ರಭೂಮಿಯ ಸಮೀಪ ಕೋಟಿ ಚೆನ್ನಯ ವೃತ್ತದ ಬಳಿ ಗೋಣಿ‌‌ ಚೀಲದಲ್ಲಿ‌ ತುಂಬಿಸಿದ ದೇಹದ ಇತರ ಭಾಗಗಳು‌ ಪತ್ತೆಯಾಗಿವೆ ಎಂದು ಪ್ರಕರಣ ದಾಖಲಿಸಿಕೊಂಡು‌ ತನಿಖೆ ನಡೆಸುತ್ತಿರುವ ಕದ್ರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಹಾಗೂ ಅಪರಾಧ ಪತ್ತೆದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ.‌

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Comments are closed.