ಕರಾವಳಿ

ಅಕ್ಷರ ಸಂತ ಹರೇಕಳ ಹಾಜಬ್ಬರವರಿಗೆ ‘ರಂಗ ಸ್ವರೂಪ ಪ್ರಶಸ್ತಿ’ ಪ್ರದಾನ

Pinterest LinkedIn Tumblr

ಮಂಗಳೂರು. ರಂಗಸ್ವರೂಪ (ರಿ)ಕುಂಜತ್ತಬೈಲ್ ಮಂಗಳೂರು 2019ರ ಸೃಜನಾಂತರಂಗ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮತ್ತು ಅಕ್ಷರ ಸಂತ ಹರೇಕಳ ಹಾಜಬ್ಬ ರವರಿಗೆ ‘ರಂಗ ಸ್ವರೂಪ ಪ್ರಶಸ್ತಿ’ ಪ್ರದಾನ ಸಮಾರಂಭ ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮರಕಡ ಕುಂಜತ್ತಬೈಲ್ ನಡೆಯಿತು.

ಖ್ಯಾತ ಕಲಾವಿದ ಮತ್ತು ಪರಿಸರ ವಾದಿ ದಿನೇಶ್ ಹೊಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹಾಜಬ್ಬ ಓರ್ವ ರಿಯಲ್ ಹೀರೊ ಆಗಿದ್ದಾರೆ. ರಂಗ ಸ್ವರೂಪ ಸಂಸ್ಥೆ ಈ ಭಾರೀಯ ಪ್ರಶಸ್ತಿಗೆ ಹರೇಕಳ ಹಾಜಬ್ಬರನ್ನು ಆಯ್ಕೆ ಮಾಡಿದು ಉತ್ತಮ ಆಯ್ಕೆಯಾಗಿದೆ.ಹಾಜಬ್ಬರಂತಹವರನ್ನು ಗುರಿತಿಸುವ ಕಾರ್ಯ ರಂಗ ಸ್ವರೂಪ ಸಂಸ್ಥೆ ಮುಂದುವರಿಸಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ ರವರಿಗೆ ‘ರಂಗ ಸ್ವರೂಪ ಪ್ರಶಸ್ತಿ2019’ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಹರೇಕಳ ಹಾಜಬ್ಬ ಮಾತನಾಡಿ, ಮಾಧ್ಯಮ ಕ್ಷೇತ್ರ ನನನ್ನು ಜಗತ್ತಿಗೆ ಗುರಿತಿಸುವ ಕೆಲಸ ಮಾಡಿದೆ. ದೇಶಾದ್ಯಂತ ನನಗೆ ನಮ್ಮ ಶಾಲೆಗೆ ಮಾನ್ಯತೆಯನ್ನು ಹೆಚ್ಚಿಸಿದೆ. ಇವತ್ತು ರಂಗ ಸ್ವರೂಪ ಸಂಸ್ಥೆ ಗುರುತಿಸಿ ರಂಗ ಸ್ವರೂಪ ಪ್ರಶಸ್ತಿ ನೀಡಿದೆ‌. ರಂಗಸ್ವ ರೂಪ ಸಂಸ್ಥೆ ಗೆ ಧನ್ಯವಾದ ಸಲ್ಲಿಸುತ್ತಿದೆ ಎಂದು ಹೇಳಿದರು.

ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ.ವಸಂತ್ ಕುಮಾರ್ ಪೆರ್ಲ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಕೌಶಲ್ಯ ಅಧಾರಿತ ಶಿಕ್ಷಣದ ಅಗತ್ಯತೆ ಇಂದಿನ ಯುವ ಪೀಳಿಗೆಗೆ ಅಗತ್ಯ ವಿದ್ದು ಇಂತಹ ಕಲಿಕೆ ಯನ್ನು ಕಳೆದ 16 ವರ್ಷಗಳಿಂದ ರಂಗ ಸ್ವರೂಪ ನೀಡುತ್ತಾ ಬಂದಿದ್ದು, ಇಂದಿನ ಸಮಾಜಕ್ಕೆ ಒಂದು ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು,

ಮ.ನ.ಪಾ ಮಾಜಿ ಉಪ ಮೇಯರ್ ಕೆ.ಮೊಹಮ್ಮದ್, ಸ್ವರೂಪ ಅಧ್ಯಯನ ಸಮೂಹಯ ನಿರ್ದೇಶಕ ಗೋಪಾಡ್ಕರ್ , ಶಾಲಾ ಮುಖ್ಯ ಶಿಕ್ಷಕಿ ಮಾಲತಿ, ಸ್ಕೇಟಿಂಗ್ ಬಾಲ ಕ್ರೀಡಾಪಟು ಪರಾಝ್ ಅಲಿ, ಸುಬ್ರಹ್ಮಣ್ಯ ಕಾಸರಗೋಡು, ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

ಶಿಬಿರ ಸಂಯೋಜಕ ರೆಹಮಾನ್ ಖಾನ್ ಕುಂಜತ್ತಬೈಲ್ ಪ್ರಸ್ತಾವಿಕ ಮಾತುಗಳಾನ್ನಾಡಿದರು, ರಂಗ ಸ್ವರೂಪದ ಸದಸ್ಯೆ ಅನೀಸಾ ಸ್ವಾಗತಿಸಿದರು, ರಂಗ ಸ್ವರೂಪದ ಸದಸ್ಯೆ ತಸ‌್ಲೀಮಾ ಬಾನು ಪ್ರಶಸ್ತಿ ಪತ್ರ ವಾಚಿಸಿದರು, ಪ್ರೇಮನಾಥ್ ಮರ್ಣೆ ಕಾರ್ಯಕ್ರಮ ನಿರೂಪಿಸಿದರು.

ಶಿಬಿರ ದಲ್ಲಿ 145 ಶಿಬಿರಾರ್ಥಿಗಳು ಭಾಗವಹಿಸಿದ್ದರು, ಬಳಿಕ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Comments are closed.