ಮಂಗಳೂರು,: ಹಳೇ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಡಶಾಲೆ ಹಾಗು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೊಕ್ಕಪಟ್ಟಣ ಮಂಗಳೂರು ಇದರ ಆಶ್ರಯದಲ್ಲಿ ಜರಗುತ್ತಿರುವ 18ನೇ ವರ್ಷದ ಎಂಟು ದಿನಗಳ ಚಿಣ್ಣರ ಚಿಲಿಪಿಲಿ ಬಾಲ ಪ್ರತಿಭಾ ಶಿಬಿರವು ಎಪ್ರಿಲ್ 28, ರವಿವಾರದಂದು ಸಂಜೆ ಸಂಪನ್ನಗೊಂಡಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಆರ್ಟ ಅಫ್ ಲಿವಿಂಗ್ನ ಮಂಗಳೂರು ಕ್ಷೇತ್ರದ ಶಿಕ್ಷಕರಾಗಿರುವ ಸದಾಶಿವ ಕಾಮತ್ರವರು ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಚಿತ್ತರಂಜನ್ ಮುಖ್ಯ ಅತಿಥಿಗಳಾಗಿದ್ದರು, ಮಾಜಿ ಕಾರ್ಪೋರೇಟರ್ ರಾಮದಾಸ್ ಪ್ರಭು ಹಾಗೂ ನಿರ್ಮಲ್ ಆಟೋ ಲಿಂಕ್ಸ್ ನ ಮಾಲಿಕರಾದ ಗಾಡ್ವಿನ್ ಕಾರ್ಯಪ್ಪ ಅತಿಥಿಗಳಾಗಿದ್ದರು.
ಬೊಕ್ಕಪಟ್ಣ ಶಾಲೆಯ ನಿವೃತ್ತ ಮುಖ್ಯೋಪಾದ್ಯಾಯಿನಿ ಶ್ರೀಮತಿ ಜೂಲಿಯಟ್ ಪಿಂಟೋ, ಮಣ್ಣಗುಡ್ಡ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪಾದ್ಯಾಯಿನಿ ರಾಜ್ಯಪ್ರಶಸ್ತಿ ವಿಜೇತೆ ಶ್ರೀಮತಿ ಜೋಯ್ಸ್ ಹೆನ್ರಿಟಾ, ಶಿಭಿರಾಧಿಕಾರಿ ಪ್ರಕಾಶ್ ನಾಯಕ್, ರವಳನಾಥ್ ಕಾಮತ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಹಾಗೂ ಶಿಬಿರದ ಪ್ತಮುಖ ಸಂಯೋಜಕರಾದ ಮೋಹನ ಶೆಟ್ಟಿ ಶಿಬಿರದ ಮಹತ್ವವನ್ನು ವಿವರಿಸಿದ್ದರು. ಸಂಘದ ಗೌರವಧ್ಯಕ್ಷ ಪ್ರವೀಣ್ ಕುಮಾರ್ ಸ್ವಾಗತಿಸಿದರು,. ಶಿಬಿರಾರ್ಥಿ ಕುಮಾರಿ ರಕ್ಷತಾ ಹಾಗೂ ಶ್ರೀಹರಿ ಕಾರ್ಯಕ್ರಮ ನಿರ್ವಹಿಸಿದರು .ಶ್ರೀಮತಿ ವಿಜೇತಾ ರೋಶನ್ ಧನ್ಯವಾದ ಅರ್ಪಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಿಬಿರದ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
Comments are closed.