ಕರ್ನಾಟಕ

ಬೆಂಗಳೂರಿನಲ್ಲಿ ಪ್ರಿಯಕರನೊಂದಿಗೆ ಸೆಕ್ಸ್ ನಡೆಸುತ್ತಿದ್ದ ವೇಳೆ ಪತಿಗೆ ರೆಡ್ ಹಾಂಡ್ ಸಿಕ್ಕಿಬಿದ್ದ ಪತ್ನಿ ! ಪತಿಗೆ ಏನು ಮಾಡಿದ್ರು ಗೊತ್ತಾ…?

Pinterest LinkedIn Tumblr

ಬೆಂಗಳೂರು: ತನ್ನ ಅಕ್ರಮ ಸಂಬಂಧವನ್ನು ಗುರುತಿಸಿದ ಪತಿಯನ್ನು ಪತ್ನಿಯೇ ಕ್ರೂರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ನಡೆದಿದೆ.

ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಮಹೇಶ್ ಶಿಂಧೆ ಎನ್ನುವ ವ್ಯಕ್ತಿ ಕೊಲೆಯಾದ ದುರ್ದೈವಿಯಾಗಿದ್ದು ಆತನ ಪತ್ನಿ ದೀಪ್ತಿ ಹಾಗೂ ಆಕೆಯ ಪ್ರಿಯಕರ ರಾಜ್ ಕುಮಾರ್ ಸೇರಿ ಈ ಹತ್ಯೆ ಮಾಡಿದ್ದಾರೆಂದು ಪೋಲೀಸರು ತಿಳಿಸಿದರು.

ಮೃತ ಮಹೇಶ್ ಶಿಂಧೆ ಆಟೋ ಚಾಲಕನಾಗಿದ್ದು ಆತನ ಪತ್ನಿ ದೀಪ್ತಿ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದಳು. ಅದೇ ಗಾರ್ಮೆಂಟ್ ನಲ್ಲಿ ಸೂಪರ್ ವೈಸರ್ ಆಗಿದ್ದ ಚಿತ್ರದುರ್ಗ ಮೂಲದ ರಾಜ್ ಕುಮಾರ್ ನೊಡನೆ ಆಕೆಗೆ ಅಕ್ರಮ ಸಂಬಂಧವಿತ್ತು. ಅವರಿಬ್ಬರೂ ದೀಪ್ತಿ ಮನೆಯಲ್ಲಿಯೇ ಆಗಾಗ ಸೇರುತ್ತಿದ್ದರು. ಇಬ್ಬರೂ ಒಟ್ಟಿದ್ದಾಗಲೇ ಪತಿ ಮಹೇಶ್ ಆಗಮಿಸಿದ್ದು ಆತ ಪತ್ನಿಯ ಕಾಮಕೇಳಿಯನ್ನು ಕಣ್ಣಾರೆ ನೋಡೋದ್ದಾನೆ. ತನ್ನ ರಹಸ್ಯ ಬಯಲಾದದ್ದರಿಂದ ಗಾಬರಿಗೊಂಡ ದೀಪ್ತಿ ತನ್ನ ಪ್ರಿಯಕರನೊಡನೆ ಸೇರಿ ಪತಿಯ ಕತ್ತು ಹಿಸುಕಿ ಈ ಕೊಲೆ ಮಾಡಿದ್ದಾಳೆ ಎಂದು ಪೋಲೀಸರು ಹೇಳಿದರು.

ಜ.8ರಂದು ಈ ಘಟನೆ ನಡೆದಿದ್ದು ಪತಿಯನ್ನು ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಮಂಚದ ಮೇಲೆ ಮಲಗಿಸಲಾಗಿತ್ತು. ಶಾಲೆಯಿಂದ ಬಂದ ಮಕ್ಕಳು ತಂದೆ ಎಲ್ಲಿ ಎಂದು ಪ್ರಶ್ನಿಸಿದಾಗಳೂ ದೀಪ್ತಿ ಎಂದಿನಂತೆ ಅವರು ಮಲಗಿ ನಿದ್ರಿಸಿದ್ದಾರೆ ಎಂದಳು. ಮತ್ತೆ ಕೆಲ ಕಾಲದ ಬಳಿಕ ತಾನೇ ವೈದ್ಯರಿಗೆ ಕರೆ ಮಾಡಿ ಮನೆಗೆ ಕರೆಸಿದ್ದು ವೈದ್ಯರು ಮಹೇಶ್ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದ್ದಾರೆ.

ಶಾಲೆಗೆ ಹೋಗಿದ್ದ ಮಕ್ಕಳು ಹಾಗೂ ನೆರೆಯವರಿಗೆ ತನ್ನ ಪತಿ ಸಹಜವಾಗಿ ಸತ್ತಿದ್ದಾನೆಂದು ಬಿಂಬಿಸಲು ಪ್ರಯತ್ನಿಸಿದ ದೀಪ್ತಿಯ ಕೃತ್ಯ ಪೋಲೀಸರ ವಿವರವಾದ ತನಿಖೆ ಬಳಿಕ ಬೆಳಕಿಗೆ ಬಂದಿದೆ. ಪೋಲೀಸರು ಮಹೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದಾಗ ಇದು ಸಹಜ ಸಾವಲ್ಲ, ಕೊಲೆ ಎನ್ನುವುದು ತಿಳಿದಿದೆ.ತನಿಖೆ ನಡೆಸಿದ ಪೋಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ಪ್ರಕಟಿಸಿದೆ.

Comments are closed.