Photo: Ashok Belman
ಯುಎಇ: ಇಲ್ಲಿನ ಹವ್ಯಾಸಿ ತುಳು ನಾಟಕ ತಂಡ ಗಮ್ಮತ್ ಕಲಾವಿದೆರ್ ಪ್ರತಿ ವರ್ಷದಂತೆ ಈ ಬಾರಿಯೂ ತುಳು ಹಾಸ್ಯಮಯ ನಾಟಕವನ್ನು ಹಮ್ಮಿಕೊಂಡಿದೆ. ಕರಾವಳಿಯ ತುಳುರಂಗ ಭೂಮಿಯ ದಿಗ್ಗಜ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಬರೆದಿರುವ ‘ತೆಲಿಕೆದ ಬರ್ಸಲು’ ನಾಟಕವನ್ನು ಫೆಬ್ರವರಿ 3 ರಂದು ಶೇಕ್ ರಾಶಿದ್ ಆಡಿಟೋರಿಯಂನಲ್ಲಿ ಪ್ರದರ್ಶಿಸಲಿದೆ.
ಈ ನಾಟಕದ ಟಿಕೆಟ್ ಹಾಗು ಕರಪತ್ರ ಬಿಡುಗಡೆ ಕಾರ್ಯಕ್ರಮ ಶುಕ್ರವಾರದಂದು ಕಿಸೆಸ್ನ ಫಾರ್ಚ್ಯೂನ್ ಕ್ಲಾಸ್ಸಿಕಲ್ ಹೋಟೆಲ್ ನಲ್ಲಿ ನಡೆಯಿತು. ಈ ವೇಳೆ ಗಮ್ಮತ್ ಕಲಾವಿದೆರ್ ಅಧ್ಯಕ್ಷೆ ಸುವರ್ಣ ಸತೀಶ್, ಪೋಷಕ ಹರೀಶ್ ಬಂಗೇರ, ಸುಗಂದ್ ರಾಜ್ ಬೇಕಲ್, ರವಿ ಶೆಟ್ಟಿಗಾರ್, ಸತೀಶ್ ಪೂಜಾರಿ, ನಾಟಕದ ನಿರ್ದೇಶಕ ವಿಶ್ವನಾಥ ಶೆಟ್ಟಿ, ವಾಲ್ಟೇರ್ ನಂದಳಿಕೆ ಮುಂತಾದವರು ಉಪಸ್ಥಿತರಿದ್ದರು.
Comments are closed.