ಅನಿವಾಸಿ ಭಾರತೀಯರು

ಅಪಘಾತದಲ್ಲಿ ತೀವೃ ಗಾಯಗೊಂಡ ಯುವಕನ ಚಿಕಿತ್ಸೆಗೆ ದಾನಿಗಳಿಂದ ಆರ್ಥಿಕ ಸಹಕಾರದ ನಿರೀಕ್ಷೆಯಲ್ಲಿದೆ ಬಡ ಕುಟುಂಬ

Pinterest LinkedIn Tumblr

ಮಂಗಳೂರು: ಕಲ್ಲಡ್ಕದಲ್ಲಿ ಸಂಭವಿಸಿದ ಹಿಟ್ ಆಂಡ್ ರನ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ದ್ವಿಚಕ್ರ ವಾಹನ ಸವಾರ ಯುವಕನ ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು ದಾನಿಗಳ ಸಹಕಾರ ಯಾಚಿಸಿದ್ದಾರೆ.

(ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮೋಹನದಾಸ್)

ಕಲ್ಲಡ್ಕದ 19 ವರ್ಷ ಪ್ರಾಯದ ಮೋಹನದಾಸ್ ಎಂಬ ತರುಣ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಯುವಕ ಚಿಕಿತ್ಸೆಗಾಗಿ ದಾಖಲಾಗಿದ್ದು ಐಸಿಯು ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಲೆ, ಕೈ ಕಾಲು ಭಾಗಕ್ಕೆ ಗಂಭೀರ ಏಟಾಗಿದೆ. ಕಳೆದ ವಾರ ಈ‌ಅಪಘಾತ ಸಂಭವಿಸಿತ್ತು ಈಗಾಗಾಲೇ ಒಂದೂವರೆ ಲಕ್ಷ ರೂಪಾಯಿ ಈತನ ಬಡ ಕುಟುಂಬ ಚಿಕಿತ್ಸೆಗಾಗಿ ಖರ್ಚು ಮಾಡಿದ್ದು ಇನ್ನು 2 ಲಕ್ಷ ರೂಪಾಯಿಗೂ ಅಧಿಕ ಮೊತ್ತ ಅಗತ್ಯವಿದೆ. ಈತನಿಗೆ ಆರ್ಥೋ ಸರ್ಜರಿ ಮಾಡಿಸಬೇಕಾದ ಅಗತ್ಯವಿರುವ ಬಗ್ಗೆ ವೈದ್ಯರು ತಿಳಿಸಿದ್ದು ಬಡ ಕುಟುಂಬ ಇದರಿಂದ ಚಿಂತೆಗೀಡಾಗಿದೆ.

(ವೈದ್ಯರ ದೃಢೀಕರಣ ಪ್ರತಿ)

ಮನೆಮಗನ ಚಿಕಿತ್ಸೆಗಾಗಿ ತೀರಾ ಬಡತನದಲ್ಲಿರುವ ಈ ಕುಟುಂಬ ದಾನಿಗಳ ಸಹಕಾರವನ್ನು ಕೋರಿದೆ. ಓದುಗರು, ದಾನಿಗಳು, ಸಹೃದಯಿಗಳು ಈ ಯುವಕನ ಚಿಕಿತ್ಸೆಗೆ ಸ್ಪಂದನೆ ನೀಡಬೇಕಾಗಿ ‘ಕನ್ನಡಿಗವರ್ಲ್ಡ್’ ವತಿಯಿಂದ ವಿಜ್ಞಾಪನೆಗಳು.

ಈ ಕೆಳಗಿನ ಖಾತೆಸಂಖ್ಯೆಗೆ ಅಥವಾ ಗೂಗಲ್ ಪೇ, ಪೋನ್ ಪೇ ಸಂಖ್ಯೆಗೆ ಧನ ಸಹಾಯ ಮಾಡಬಹುದಾಗಿದೆ.

Bank of baroda
Name: Puneeth Kumar
Ac no: 71250100019726
Branch: Kalladka
IFSC: BARB0VJKDKA

Phone pay number
Google pay number
8296482149

Comments are closed.