ಆರೋಗ್ಯ

ಬೆಳ್ಳುಳ್ಳಿ ಎಸಲನ್ನು ಮೆಂಥಾಲ್ ಜೊತೆ ಅರೆದು ಹುಳುಕಡ್ಡಿ ಬಳಿ ಹಚ್ಚಿದರೆ ನಿವಾರಣೆ ಸಾಧ್ಯ.

Pinterest LinkedIn Tumblr

ಬೆಳ್ಳುಳ್ಳಿಯ ಉಪಯೋಗಗಳನ್ನು ಎಲ್ಲರೂ ಅಡುಗೆಯಲ್ಲಿ ಮಾತ್ರವಲ್ಲದೆ ಹಲವು ಸಮಸ್ಯೆಗಳಿಗೆ ಕೂಡ ಪರಿಹಾರ ಕಂಡುಕೊಳ್ಳಬಹುದು. ಹಲವು ದೈಹಿಕ ಸಮಸ್ಯೆಗಳಿಗೆ ಇದ್ದು ಉತ್ತಮ ಮನೆಮದ್ದು.

ಪಾರ್ಶ್ವವಾಯು ಹೊಂದಿರುವ ವ್ಯಕ್ತಿಗೆ ರಾತ್ರಿ ಮಲಗುವ ಮುನ್ನ ಹತ್ತು ಗ್ರಾಂ ಬೆಳ್ಳುಳ್ಳಿಯನ್ನು ಅರೆದು ಹಾಲಿನಲ್ಲಿ ಹಾಕಿ ಚನ್ನಾಗಿ ಕಾಯಿಸಿ ಹಲವು ದಿನಗಳ ಕಾಲ ಸೇವಿಸಿದರೆ ಪಾರ್ಶ್ವವಾಯು ಭಾಗಗಳಲ್ಲಿ ಸ್ವಲ್ಪ ಚೇತರಿಕೆ ಕಂಡುಬರುವುದು. ಇನ್ನು ಕೆಮ್ಮು ಸಮಸ್ಯೆಗೆ ಬೆಳ್ಳುಳ್ಳಿ ಹೇಗೆ ಉಪಯೋಗಕಾರಿ ಅಂದರೆ ಕೆಮ್ಮು ಹಾಗು ನೆಗಡಿಯಿಂದ ಬಳಲುವವರು ಪ್ರತಿಸಿನ ಒಂದೆರಡು ಬೆಳ್ಳುಳ್ಳಿಯನ್ನು ಸೇವಿಸಿದರೆ ಕೆಮ್ಮು ಶಮನವಾಗುವುದು.

ಹುಳುಕಡ್ಡಿ ಸಮಸ್ಯೆಗೆ ಬೆಳ್ಳುಳ್ಳಿ ಮದ್ದು ಹೇಗೆ ಅನ್ನೋದನ್ನ ನೋಡುವುದಾದರೆ, ಬೆಳ್ಳುಳ್ಳಿ ಹಳಕುಗಳನ್ನು ಮೆಂಥಾಲ್ ಜೊತೆ ಸೇರಿಸಿ ಅರೆದು ಹುಳುಕಡ್ಡಿಯಾಗಿರುವಂತ ಜಾಗಕ್ಕೆ ೩ ರಿಂದ ನಾಲ್ಕು ದಿನಗಳು ಲೇಪಿಸಿದರೆ ಹುಳುಕಡ್ಡಿ ನಿವಾರಣೆಯಾಗುವುದು. ಇನ್ನು ಉಬ್ಬಸ ಸಮಸ್ಯೆಗೆ ಬೆಳ್ಳುಳ್ಳಿ ಹೇಗೆ ಸಹಕಾರಿ ಅನ್ನೋದನ್ನ ಹೇಳುವುದಾದರೆ ಹಾಲಿನಲ್ಲಿ ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುತ್ತಿದ್ದರೆ ಉಬ್ಬಸ ನಿಯಂತ್ರಣವಾಗುದು.

ಅಷ್ಟೇ ಅಲ್ಲದೆ ನರ ದೌರ್ಬಲ್ಯ ಸಮಸ್ಯೆ ಇರೋರಿಗೆ ಬೆಳ್ಳುಳ್ಳಿ ಹೇಗೆ ಪರಿಣಾಮಕಾರಿ ಅಂದರೆ ಬೆಳ್ಳುಳ್ಳಿಯನ್ನು ನುಣ್ಣಗೆ ಗೋಲಿ ಗಾತ್ರದಷ್ಟು ಅರೆದು ಒಂದು ಬಟ್ಟಲು ಹಾಲಿನಲ್ಲಿ ಕದಡಿ ಚನ್ನಾಗಿ ಕಾಯಿಸಿ ಇದನ್ನು ಪ್ರತಿದಿನ ಸೇವಿಸುವುದರಿಂದ ನರ ದೌರ್ಬಲ್ಯದಿಂದ ಪ್ರಾಪ್ತವಾಗುವ ರೋಗಗಳಿಂದ ಮುಕ್ತರಾಗಬಹುದು. ಇನ್ನು ಬೆಳ್ಳುಳ್ಳಿ ಕ್ಷಯ ರೋಗಿಗಳಿಗೆ ಹೇಗೆ ಉಪಯೋಗಕಾರಿ ಅನ್ನೋದನ್ನ ತಿಳಿಯುವುದಾದರೆ ಪ್ರತಿದಿನ ಬೆಳ್ಳುಳ್ಳಿ ಸೇವಿಸುತ್ತಿದ್ದರೆ ಕ್ಷಯ ರೋಗದಿಂದ ಮುಕ್ತರಾಗಿರುವಂತವರಿಗೆ ಈ ಕ್ಷಯ ರೋಗ ಮರುಕಳಿಸೋದಿಲ್ಲ.

Comments are closed.