ಆರೋಗ್ಯ

ಕೊಲ್ಲೂರು ಕೋವಿಡ್ ಆಸ್ಪತ್ರೆಯ ಕೊರೋನಾ ವಾರಿಯರ್ಸ್ ನಿಜವಾದ ಹೀರೋಗಳೆಂದು ಹೊಗಳಿದ ಉಡುಪಿ ಡಿಸಿ ಜಿ. ಜಗದೀಶ್

Pinterest LinkedIn Tumblr

ಕುಂದಾಪುರ: ಕೊಲ್ಲೂರು ಕೋವಿಡ್ ಆಸ್ಪತ್ರೆಯ ಕೊರೋನಾ ವಾರಿಯರ್ಸ್ ತಂಡಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಶಹಬ್ಬಾಸ್ ಎಂದು ಹೊಗಳಿದ್ದಾರೆ.

‘ಕೊಲ್ಲೂರಿನ ಕೋವಿಡ್-19 ಆಸ್ಪತ್ರೆಯ ಕರೋನ ವಾರಿಯರ್ಸ್!!!ನಿಮಗಿದೋ ನನ್ನ ನಮನ!! 250 ಕ್ಕೂ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಿದ ನೀವು ನಿಜವಾದ ಹೀರೋಗಳು’ ಎಂದು ಡಿಸಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಾರಿಯರ್ಸ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಸೇರಿದಂತೆ, ಇತರೆ ರಾಜ್ಯಗಳಿಂದ ಬಂದವರಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು ಮೂರ್ನಾಲ್ಕು ವಾರಗಳಿಂದ ಕೊರೋನಾ ಪ್ರಕರಣಗಳು ಗಣನೀಯ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇತ್ತು. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಸಮಯಕ್ಕೆ ಸಮಯೋಚಿತ ನಿರ್ಧಾರ ಕೈಂಗೊಂಡು ಜಿಲ್ಲೆಯಲ್ಲಿ ಒಂದಷ್ಟು ನಿಯೋಜಿತ ಸ್ಥಳಗಳಲ್ಲಿ ಕೋವಿಡ್ ಆಸ್ಪತ್ರೆ ತೆರೆದು ಯಾವುದೇ ಲಕ್ಷಣಗಳಿಲ್ಲದೆ ಸೋಂಕು ದೃಢಪಟ್ಟಂತಹವರಿಗೆ ಚಿಕಿತ್ಸೆ ಕೊಡಲಾಗಿತ್ತು. ಅದರಂತೆಯೇ ಕೊಲ್ಲೂರಿನಲ್ಲೂ ಕೋವಿಡ್ ಆಸ್ಪತ್ರೆ ತೆರೆಯಲಾಗಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.