ಆರೋಗ್ಯ

ಲಾಕ್‌‍ಡೌನ್‌ ಆದೇಶ ಮೀರಿ ವಿವಾಹ: ವಧು,ವರ ಸಹಿತ 11 ಮಂದಿಯ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ಉಡುಪಿ: ಲಾಕ್‌‍ಡೌನ್‌ ನಿಯಮಗಳನ್ನು ಉಲ್ಲಂಘಿಸಿ ಜಿಲ್ಲಾಧಿಕಾರಿಗಳ ಅನುಮತಿ ರಹಿತವಾಗಿ ರವಿವಾರ ವಿವಾಹ ಸಮಾರಂಭ ಏರ್ಪಡಿಸಿದ ಆರೋಪದಲ್ಲಿ ವಧು, ವರನ ಸಹಿತ 11 ಮಂದಿಯ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲೆವೂರು ಗ್ರಾಮದ ದುಗ್ಲಿಪದವಿನಲ್ಲಿ ರವಿವಾರ ಈ ವಿವಾಹ ನಡೆದಿದೆ. ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುಡೇಕರ್‌, ಕಂದಾಯ ನಿರೀಕ್ಷಕ ಶ್ರೀನಿವಾಸ್‌ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದಾಗ ಮಂಚಿಯ ಯುವಕ ಮತ್ತು ಮಂಗಳೂರು ಬೋರುಗುಡ್ಡೆಯ ಯುವತಿ ಆದೇಶ
ಉಲ್ಲಂಘಿಸಿ ವಿವಾಹವಾಗಿದ್ದಾರೆ ಎನ್ನಲಾಗಿದೆ.

ಮದುವೆಯಲ್ಲಿ ಹಲವರು ಭಾಗವಹಿಸಿದ್ದು, ವಧು ಅನುಮತಿ ಪಡೆಯದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿರುವುದಾಗಿ ದೂರಲಾಗಿದೆ.

Comments are closed.