ಆರೋಗ್ಯ

ಊಟದ ನಂತರ ಈ ಹಣ್ಣು ತಿನ್ನುವುದರಿಂದ ದೇಹದಲ್ಲಿನ ಸಕ್ಕರೆ ಪ್ರಮಾಣ ಮಿತವಾಗಿ ಇರಲು ಸಹಕಾರಿ

Pinterest LinkedIn Tumblr

ಅಂಜೂರ ಹಣ್ಣು ತಿಂದರೆ ಹೃದಯದ ಕಾಯಿಲೆ ಬರುವುದಿಲ್ಲ. ಅತ್ತಿಹಣ್ಣು ಅಥವಾ ಇದನ್ನು ಅಂಜೂರ ಹಣ್ಣು ಎಂದು ಕರೆಯುತ್ತಾರೆ ತುಂಬಾ ಜನರಿಗೆ ಈ ಹಣ್ಣಿನ ಬಗ್ಗೆ ಒಂದು ತಪ್ಪು ಕಲ್ಪನೆ ಇದೆ ಅದೇನೆಂದರೆ ಈ ಹಣ್ಣನ್ನು ತಿನ್ನಬಾರದು ಅಂತ ಹಾಗೇನೇ ಇದು ಆರೋಗ್ಯಕ್ಕೆ ಒಳ್ಳೆಯದು ಅಲ್ಲ ಅಂತ ತುಂಬಾ ಜನರ ಒಂದು ಭಾವನೆಯಾಗಿದೆ ಆದರೆ ಈ ಹಣ್ಣನ್ನು ತಿನ್ನುವುದರಿಂದ ಆಗುವ ಉಪಯೋಗಗಳ ಬಗ್ಗೆ ನೀವು ತಿಳಿದರೆ ನಿಜಕ್ಕೂ ನೀವು ಆಶ್ಚರ್ಯ ಪಡುತ್ತಿರ ಅತ್ತಿಹಣ್ಣು ಅಥವಾ ಅಂಜೂರ ಹಣ್ಣು ಎಂದು ಕರೆಯಲ್ಪಡುವ ಈ ಹಣ್ಣನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ಈ ಒಂದು ಲೇಖನದಲ್ಲಿ ತಿಳಿಯೋಣ. ಮಧುಮೇಹ ಅಥವಾ ಸಕ್ಕರೆಕಾಯಿಲೆ ಇರುವವರು ಅಂಜೂರವನ್ನು ಊಟದ ನಂತರ ತಿನ್ನುವುದರಿಂದ ಅವರ ದೇಹದಲ್ಲಿ ಸಕ್ಕರೆ ಪ್ರಮಾಣ ಮಿತವಾಗಿ ಇರುವಂತೆ ಈ ಹಣ್ಣು ನೋಡಿಕೊಳ್ಳುತ್ತದೆ

ಚನ್ನಾಗಿ ಒಣಗಿದ ಹಣ್ಣನ್ನು ತಿನ್ನುವುದರಿಂದ ಕ್ಯಾನ್ಸರ್ ನ ಸಮಸ್ಯೆ ದೂರವಾಗುತ್ತದೆ ಅಲ್ಲದೆ ಈ ಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಇರುವದರಿಂದ ಈ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಇನ್ಸ್ಪೆಕ್ಷನ್ ಆಗದಂತೆ ತಡೆಯುತ್ತದೆ. ಅಂಜೂರದ ಹಣ್ಣಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೇರಳವಾಗಿ ಇರುತ್ತದೆ ಇದನ್ನು ತಿನ್ನುವುದರಿಂದ ನಮ್ಮ ಮೂಳೆಗಳು ತುಂಬಾ ಗಟ್ಟಿಯಾಗಿ ಇರುತ್ತದೆ ಮೂಳೆ ಮುರಿತ ತುಂಬಾ ಗಟ್ಟಿಯಾಗಿ ಇರುವವರು ಅಂಜೂರದ ಹಣ್ಣನ್ನು ತಿನ್ನುವುದರಿಂದ ಮೂಳೆಗಳು ಬೇಗನೆ ಅಂಟಿಕೊಳ್ಳುತ್ತದೆ ಅಂಜೂರದ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಇರುವುದರಿಂದ ಇದನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ ಇದು ನಮ್ಮ ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ ಇದರಿಂದ ನಮ್ಮ ದೇಹದ ತೂಕವನ್ನು ನಾವು ಕಡಿಮೆ ಮಾಡಿಕೊಳ್ಳಬಹುದು.

ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗುವಷ್ಟು ಪೊಷ್ಟಿಕಾಂಶಗಳು ಸಿಗುತ್ತವೆ ಇದನ್ನು ಊಟಕ್ಕಿಂತ ಮೊದಲು ತಿನ್ನುವುದೇ ಒಳ್ಳೆಯದು ಇದರಿಂದ ನಮಗೆ ಹೆಚ್ಚು ಊಟ ಸೇರುವುದಿಲ್ಲ ನಮ್ಮ ದೇಹಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟೇ ಊಟವನ್ನು ನಾವು ಮಾಡುತ್ತೆವೆ ಆಗ ನಮ್ಮ ದೇಹದ ತೂಕ ಕಡಿಮೆಯಾಗುತ್ತದೆ ಆರೋಗ್ಯ ಚೆನ್ನಾಗಿರುತ್ತದೆ ಅಂಜೂರದ ಹಣ್ಣು ಅಥವಾ ಅತ್ತಿಹಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂ ಅಂಶಗಳು ಹೇರವಾಗಿ ಸಿಗುತ್ತದೆ ಇದನ್ನು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ತಿನ್ನುವುದರಿಂದ ಅವರ ರಕ್ತದೊತ್ತಡವು ಹೆಚ್ಚಾಗದಂತೆ ಈ ಹಣ್ಣು ನೋಡಿಕೊಳ್ಳುತ್ತದೆ ಅತ್ತಿಹಣ್ಣನ್ನು ಚನ್ನಾಗಿ ತಿನ್ನುವುದರಿಂದ ಇದು ನಮ್ಮ ದೇಹದಲ್ಲಿರುವ ಕೆಟ್ಟ ರಕ್ತವನ್ನು ಶುದ್ಧಿಕರಿಸುತ್ತದೆ.

ಹಾಗೇನೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಇದನ್ನು ಹೆಚ್ಚಾಗಿ ತಿನ್ನುವುದರಿಂದ ಅವರ ಸಮಸ್ಯೆ ದೂರವಾಗುತ್ತದೆ. ಜೊತೆಗೆ ಈ ಹಣ್ಣಿನಲ್ಲಿ ಪೆಕ್ವೀನ್ ಎಂಬ ಅಂಶವಿರುತ್ತದೆ ಈ ಅಂಶವು ದೇಹದಲ್ಲಿ ಬೇಡವಾದ ಪಧಾರ್ಥಗಳನ್ನು ಅಥವಾ ವ್ಯರ್ಥ ಪದಾರ್ಥಗಳನ್ನು ದೇಹದಿಂದ ಹೊರಹಾಕುತ್ತದೆ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹೃದಯ ಸಂಬಂದಿ ಕಾಯಿಲೆಗಳು ಬರುವುದಿಲ್ಲ ಮತ್ತು ಹೃದಯ ಚನ್ನಾಗಿ ಕೆಲಸ ಮಾಡಿಕೊಳ್ಳುವಂತೆ ನೋಡಿಕೊಳ್ಳುತ್ತದೆ ಈ ಹಣ್ಣು ನಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುತ್ತದೆ ಅಥವಾ ಸುತ್ತಮುತ್ತಲಿನ ಅಂಗಡಿಗಳಲ್ಲಿ ಇದು ಸಿಗುತ್ತದೆ.

Comments are closed.