ಆರೋಗ್ಯ

ಆಹಾರದಲ್ಲಿ ಮೂಲಂಗಿ ಮತ್ತು ಪುದೀನಾಗಳ ಬಳಯಿಂದ ಚರ್ಮಕ್ಕೆ ಯಾವ ರೀತಿ ರಕ್ಷಣೆ ಸಿಗುವುದು ಬಲ್ಲಿರಾ..?

Pinterest LinkedIn Tumblr

ಪುದಿನಾ:

♦ ಪುದಿನಾ ಒಡೆದ ಚರ್ಮಕ್ಕೆ ರಾಮಬಾಣ.
♦ ಕೀಟಗಳು ಕಚ್ಚಿದ ಜಾಗ ಅಥವಾ ಅಲರ್ಜಿಯಾದ ಭಾಗಕ್ಕೆ ಪುದಿನಾ ಸೊಪ್ಪನ್ನು ಜಜ್ಜಿ ಅದರ ರಸವನ್ನು ಹಚ್ಚಿದಲ್ಲಿ ಮಾಯವಾಗುತ್ತದೆ.
♦ ಇದು ಸತ್ತ ಚರ್ಮಕೋಶಕ್ಕೆ ಜೀವ ನೀಡಲಿದ್ದು ಚರ್ಮ ಒಡೆದಿದ್ದಲ್ಲಿ ಹಚ್ಚಿ.
♦ ಮೊಡವೆ ಕಲೆಗಳ ನಿವಾರಣೆಗೂ ಕೂಡ ಸೂಕ್ತ.
♦ ಸ್ವಲ್ಪ ಎಲೆಗಳನ್ನು ನೀರಿಗೆ ಹಾಕಿ ಕಾಯಿಸಿ ಅದರಲ್ಲಿ ಪಾದಗಳನ್ನು ಇರಿಸಿ ಆಗ ಕಾಲಿನ ಒಡಕು ಮತ್ತು ದುರ್ವಾಸನೆ ಮಾಯವಾಗುತ್ತದೆ.
ಹೀಗೆ ವಾರಕ್ಕೊಮ್ಮೆ ಮಾಡಿ.

ಮೂಲಂಗಿ:

ಮೂಲಂಗಿ ಅನೇಕ ಖಾಯಿಲೆಗಳನ್ನು ಗುಣ ಮಾಡುತ್ತೆ
ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.- ಮೂಲಂಗಿ ಬೀಜವನ್ನು ನಿಂಬೆರಸದಲ್ಲಿ ಅರೆದು ಹಚ್ಚುವುದರಿಂದ ಹುಳುಕಡ್ಡಿ, ತುರಿ ರೋಗಗಳು ಗುಣವಾಗುತ್ತದೆ.

– ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.
– ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
– ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.
– ಮೂಲಂಗಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮೂತ್ರವೂ ಕಟ್ಟಿಕೊಂಡಿದ್ದರೆ ಅದರ ಬಿಡುಗಡೆಯಾಗುತ್ತದೆ.
– ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರಿಸಬಹುದು, ಇದು ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆದರೆ ಚೆನ್ನಾಗಿರುವ ಸೊಪ್ಪನ್ನು ನೋಡಿ ತೆಗೆದುಕೊಳ್ಳಬೇಕು.
ಎಲ್ಲದಕ್ಕೂ ಮಿತಿ ಇರಲಿ ಹೆಚ್ಚಾದರೆ ಅಮೃತವು ವಿಷವಾಗುವುದು

Comments are closed.