ಆರೋಗ್ಯ

ಕೆಮ್ಮು ನಿವಾರಾಣೆಗೆ ಇಲ್ಲಿದೆ ಮನೆಮದ್ದು…

Pinterest LinkedIn Tumblr

-ಕೆಮ್ಮಿನಿಂದ ಗಂಟಲು ಉರಿ ಇದ್ದರೆ ಹಾಗೂ ಹಳದಿ ಬಣ್ಣದ ಕಫ ಬರುತ್ತದ್ದರೆ ಜೇಷ್ಠಮಧು ಪುಡಿಯೊಂದಿಗೆ ತುಪ್ಪ ಮತ್ತು ಜೇನುತುಪ್ಪ ಕಲಸಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

-ಒಂದೆಲಗದ ಕಷಾಯವನ್ನು ಸೇವಿಸಿದರೆ ಕೆಮ್ಮು ಗುಣವಾಗುತ್ತದೆ.

-ಒಣಕೆಮ್ಮು ಇದ್ದರೆ ಕ್ಯಾರೆಟ್‌ ಜ್ಯೂಸ್‌ಗೆ ಕರಿಮೆಣಸಿನ ಪುಡಿ ಮತ್ತು ಸಕ್ಕರೆ ಸೇರಿಸಿ ಸೇವಿಸಿದರೆ ಕಡಿಮೆಯಾಗುತ್ತದೆ.

-ಒಂದು ಚಮಚ ವಿಳ್ಳೆದೆಲೆ ರಸಕ್ಕೆ 1/4 ಚಮಚ ಬಿಳಿ ಈರುಳ್ಳಿ ರಸ, 2 ಚಮಚ ಜೇನುತುಪ್ಪ ಹಾಗೂ ಸ್ವಲ್ಪ ಹಿಂಗು ಸೇರಿಸಿ ಸೇವಿಸಿದರೆ ಮಕ್ಕಳಲ್ಲಿ ಬರುವ ಕೆಮ್ಮು ನಿವಾರಣೆಯಾಗುತ್ತದೆ.

-8-10 ಹನಿ ಬಾದಾಮಿ ಎಣ್ಣೆಯನ್ನು ಒಂದು ಲೋಟ ಹಾಲಿನಲ್ಲಿ ಸೇವಿಸಿದರೆ ಒಣಕೆಮ್ಮು ಕಡಿಮೆಯಾಗುತ್ತದೆ.

– ನೆಗಡಿ, ಗಂಟಲು ಕೆರೆತ, ನೋವು ಶುರುವಾದ ಕೂಡಲೇ ಬಿಸಿ ನೀರಿಗೆ ಸೈಂಧವ ಉಪ್ಪು ಹಾಕಿ ಗಾರ್ಗಲ್‌ ಮಾಡಬೇಕು.

-ಎದೆಯಲ್ಲಿ ಕಫ ಕಟ್ಟಿ ಹೆಚ್ಚು ಕೆಮ್ಮಿದ್ದರೆ, ಸಾಸಿವೆ ಎಣ್ಣೆಗೆ ಸ್ವಲ್ಪ ಉಪ್ಪನ್ನು ಸೇರಿಸಿ ಬಿಸಿಮಾಡಿ ಇಡೀ ಶರೀರಕ್ಕೆ ಹಚ್ಚಿ, ಬಿಸಿ ನೀರಲ್ಲಿ ಸ್ನಾನ ಮಾಡಬೇಕು.

-ಜೇನುತುಪ್ಪ, ತುಪ್ಪ, ಅರಿಶಿನ, ಲವಂಗ, ಕರಿಮೆಣಸು, ಹಿಪ್ಪಲಿಯನ್ನು ಊಟದಲ್ಲಿ ಹೆಚ್ಚು ಬಳಸಬೇಕು.

Comments are closed.