ಕ್ರೀಡೆ

ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ ಅಶ್ವಿನ್ ! ಕಾರಣ ಇಲ್ಲಿದೆ ನೋಡಿ….

Pinterest LinkedIn Tumblr

r-ashwin-dhoni

ಚೆನ್ನೈ:ಐಸಿಸಿ ವರ್ಷದ ಕ್ರಿಕೆಟಿಗ ಹಾಗೂ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದಿರುವ ಅಶ್ವಿನ್, ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಶಸ್ತಿ ಪಡೆದ ಬಳಿಕ ಸ್ಪಿನ್ ಮಾಂತ್ರಿಕ ಕೃತಜ್ಞತೆ ಸಲ್ಲಿಸುವಾಗ ಧೋನಿ ಹೆಸರನ್ನು ಪ್ರಸ್ತಾಪಿಸದೇ ಇರುವುದು ಇದಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಶ್(ಐಸಿಸಿ) ವಾರ್ಷಿಕ ಪ್ರಶಸ್ತಿಗಳಲ್ಲಿ ಡಬಲ್ ಸಾಧನೆ ಮಾಡಿದ ಬಳಿಕ ಅಶ್ವಿನ್ ಧನ್ಯವಾದ ಭಾಷಣ ಮಾಡಿದರು. ಆದರೆ ಭಾಷಣದಲ್ಲಿ ಎಂಎಸ್ ಧೋನಿ ಹೆಸರನ್ನು ಪ್ರಸ್ತಾಪಿಸದೆ ವಿರಾಟ್ ಕೊಹ್ಲಿ ಹೆಸರನ್ನು ಹೆಚ್ಚಾಗಿ ಪ್ರಸ್ತಾಪಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಅವರನ್ನು ಧೋನಿ ಅಭಿಮಾನಿಗಳು ಟೀಕಿಸಿದ್ದಾರೆ.

2011ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ದಿನದಿಂದಲೂ ಅಶ್ವಿನ್ ರ ಕ್ರಿಕೆಟ್ ಜೀವನದ ಪ್ರಗತಿಯಲ್ಲಿ ಧೋನಿ ಮಹತ್ವದ ಪಾತ್ರ ವಹಿಸಿದ್ದಾರೆ. 2014ರಲ್ಲಿ ಐಪಿಎಲ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಮಾನತಾಗುವವರೆಗೂ ಧೋನಿ ಮೊದಲ ಆಯ್ಕೆ ಸ್ಪಿನ್ನರ್ ಆಗಿ ಅಶ್ವಿನ್ ಇದ್ದರು. ಇಷ್ಟಾದರೂ ಧೋನಿ ಹೆಸರನ್ನು ಅಶ್ವಿನ್ ಪ್ರಸ್ತಾಪಿಸದೆ ಇರುವುದು ಧೋನಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ.

ಯಾರಿಂದ ತಮ್ಮ ಕ್ರಿಕೆಟ್ ಜೀವನ ಆರಂಭವಾಯಿತೋ ಯಾರಿಂದ ನಿಮ್ಮ ಕ್ರೀಡಾ ಜೀವನ ಯಶಸ್ಸಿನ ದಾರಿ ಹಿಡಿಯಿತೋ ಆ ವ್ಯಕ್ತಿಯನ್ನು ನೀವು ಅಲಕ್ಷ್ಯ ಮಾಡುತ್ತಿದ್ದೀರಿ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

Comments are closed.