ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಣೆ ಮಾಡಿತ್ತು. ಆದರೆ, ಇದರಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹೆಸರು ಇರದಿರುವುದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ಅವರು ಪ್ರಶಸ್ತಿ ಪಡೆಯಲು ಅರ್ಹರು ಎಂದು ವಾದಿಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಪದ್ಮಶ್ರೀ ದೊರೆತಿದೆ. ಆದರೆ, ಶಿವರಾಜ್ಕುಮಾರ್ಗೆ ಪ್ರಶಸ್ತಿ ಏಕಿಲ್ಲ ಎನ್ನುವುದು ಶಿವರಾಜ್ಕುಮಾರ್ ಅಭಿಮಾನಿಗಳ ಪ್ರಶ್ನೆ. “ಕಂಗನಾ ಕೇವಲ 30 ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ನಮ್ಮ ಶಿವಣ್ಣ 120 ಚಿತ್ರಗಳಲ್ಲಿ ನಟಿಸಿದ್ದಾರೆ. ಕಂಗನಾಗಿಂತ ಹೆಚ್ಚು ಚಿತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ,” ಎಂದಿದ್ದಾರೆ ಶಿವರಾಜ್ಕುಮಾರ್ ಅಭಿಮಾನಿಗಳು.
“ಶಿವಣ್ಣನ ಮೊದಲ ಸಿನಿಮಾ 1986ರಲ್ಲಿ ಬಿಡುಗಡೆ ಆಗಿದೆ. ಕಂಗನಾ ರಣಾವತ್ ಹುಟ್ಟಿದ್ದೆ 1987 ರಲ್ಲಿ. ಕಂಗನಾ ಹಿಟ್ ಸಿನಿಮಾಗಳಿಗಿಂತ ಫ್ಲಾಪ್ ಚಿತ್ರಗಳನ್ನೇ ನೀಡಿದ್ದು ಹೆಚ್ಚು. ಹೀಗಿರುವಾಗ, ಶಿವರಾಜಕುಮಾರ್ ಅವರಂಥ ಹಿರಿಯ ಕಲಾವಿದರು ಕಾಣಲಿಲ್ಲವೇ,” ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
Comments are closed.