ಸುದ್ದಿಗೆ ಗ್ರಾಸವಾದ ಕಾಂಗ್ರೆಸ್ ಶಾಸಕ ಮಾಲಿಕಯ್ಯ ಗುತ್ತೇದಾರ್ ಜತೆಗೆ ಉದಯವಾಣಿ ಫಟಾಫಟ್ ಸಂದರ್ಶನ
* ದೇವೇಗೌಡರ ಸ್ವಾಗತಕ್ಕೆ ಫ್ಲೆಕ್ಸ್ ಹಾಕಿದ್ರಂತೆ ?
ಅಯ್ಯೋ ದೇವೇಗೌಡರು ನಮಗೆ ನೀರಾವರಿ ಮಾಡಿಕೊಟ್ಟಿದ್ದಾರೆ. 22 ವರ್ಷಗಳ ನಂತರ ನನ್ನ ಕ್ಷೇತ್ರಕ್ಕೆ ಬಂದಿದ್ದರು. ನಮ್ಮ ಅಭಿಮಾನಿಗಳು ಅವರನ್ನು ಸ್ವಾಗತಿಸಲು ಬ್ಯಾನರ್ ಕಟ್ಟಿದ್ದಾರೆ. ದೇವೇಗೌಡರ ಬಗ್ಗೆ ನನಗೆ ಗೌರವ ಇದೆ. ನಾನು ಸ್ಟೇಟ್ ಫಾರ್ವರ್ಡ್. ಮಾಡಿದ್ದನ್ನ ಹೇಳಿಕೊಳ್ಳಲಿಕ್ಕೆ ನನಗೇನು ಭಯಾ.
* ಜೆಡಿಎಸ್ ಸೇರ್ತೀರಿ ಅಂತ ಗುಮಾನಿ ಇದೆಯಲ್ಲಾ ?
ಆ ಥರಾ ಏನಿಲ್ಲಾ. ಅದನ್ನೆಲ್ಲಾ ಈಗಾಗಲೇ ಕ್ಲೀಯರ್ ಮಾಡಿದೀನಿ. ದೇವೇಗೌಡರೂ ಹೇಳಿದ್ದಾರೆ. ಕಾಂಗ್ರೆಸ್ನಿಂದಲೇ ಸ್ಪರ್ಧೆ ಮಾಡ್ತೀನಿ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ದೇವೇಗೌಡರಿಗೆ ಬ್ಯಾನರ್ ಹಾಕಿದ್ದನ್ನೇ ದೊಡ್ಡ ಸುದ್ದಿ ಮಾಡಿ ಪ್ರಚಾರ ಮಾಡ್ತಿದ್ದಾರೆ. ಈ ಬಗ್ಗೆ ನನಗೆ ಪಕ್ಷದಿಂದ ಯಾವುದೇ ನೋಟಿಸ್ ಬಂದಿಲ್ಲ. ಬಂದ್ರೂ ಪಕ್ಷಕ್ಕೆ ನಾನು ಉತ್ತರ ಕೊಡ್ತೀನಿ.
* ಕಾಂಗ್ರೆಸ್ನಿಂದ ಟಿಕೆಟ್ಗೆ ಅರ್ಜಿ ತೊಗೊಂಡಿದ್ದೀರಾ ?
ನಾನು ಹಾಲಿ ಎಮ್ಮೆಲ್ಲೆ ನಾವ್ಯಾಕ್ ಅರ್ಜಿ ತೊಗೊಳ್ಳಬೇಕು. ಯಾರು ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದಾರೆ, ಯಾರು ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡ್ತಿದ್ದಾರೆ ಅಂತವರು ಅರ್ಜಿ ಹಾಕಬೇಕು. ನಮಗೆಲ್ಲಾ ಅವರೇ ಬಂದು ಟಿಕೆಟ್ ಕೊಡ್ತಾರೆ. ನಮಗೇನು ಸಮಸ್ಯೆ ಇಲ್ಲ.
-ಉದಯವಾಣಿ
Comments are closed.