ಮುಂಬೈ

ರಾಣಿ… ಮತ್ತೆ ಎಂಟ್ರಿಯಾಗುತ್ತಿದ್ದಾರೆ : ಆದರೆ ಮುಖರ್ಜಿ… ಚಿತ್ರ ನೋಡಲು ಇನ್ನೂ ಒಂದು ವರ್ಷ ಕಾಯಬೇಕಂತೆ..

Pinterest LinkedIn Tumblr

rani-mukarji_1

ಮುಂಬಾಯಿ : ನಿಮಗೆ ರಾಣಿ ಮುಖರ್ಜಿ ನೆನಪಿರಬೇಕಲ್ಲವೇ.. ಹೌದು ಅತಿ ಹೇ ಕಂಡಾಲ ಹಾಡಿನ ಮೂಲಕ ಯುವಕರ ನಿದ್ದೆಗೆಡಿಸಿದ ಬೆಕ್ಕಿನಕಂಗಳ ಸುಂದರಿ ‘ರಾಣಿ’ ಬಗ್ಗೆಯೇ ಕೇಳುತ್ತಿದ್ದೇನೆ. ಮದುವೆ ಬಳಿಕ ಮರೆಯಾಗಿದ್ದ ರಾಣಿ ಮತ್ತೆ ಬೆಳ್ಳಿತೆರೆಗೆ ಎಂಟ್ರಿಯಾಗುತ್ತಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ರಾಣಿ ಮತ್ತು ಆದಿತ್ಯ ಚೋಪ್ರಾ ಏಪ್ರಿಲ್ 2014ರಲ್ಲಿ ಇಟಲಿಯಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು.

ಮದುವೆಯ ನಂತರ ರಾಣಿ ಗಂಡ, ಮನೆ, ಅಂತ ಬ್ಯುಸಿಯಾಗಿದ್ದರು. ಇನ್ನು ಕಳೆದ ಡಿಸೆಂಬರ್ನಲ್ಲಿ ಈ ತಾರಾ ಜೋಡಿಗೆ ಹೆಣ್ಣು ಮಗು ಹುಟ್ಟಿತ್ತು.ಕಳೆದ 10 ತಿಂಗಳಿನಿಂದ ಮಗುವಿನ ಲಾಲನೆ ಪೋಷಣೆಯಲ್ಲಿ ಬ್ಯುಸಿಯಾಗಿದ್ದ ತಾಯಿ ರಾಣಿ ಇದೀಗ ಮತ್ತೆ ಮುಖಕ್ಕೆ ಬಣ್ಣ ಹಚ್ಚೋದಕ್ಕೆ ಸಜ್ಜಾಗಿದ್ದಾಳೆ.

2014ರ ಆಗಸ್ಟ್ನಲ್ಲಿ ತೆರೆಕಂಡ ‘ಮರ್ದಾನಿ’ ಚಿತ್ರದ ನಂತರ ರಾಣಿ ಮುಖರ್ಜಿ ಯಾವ ಚಿತ್ರದಲ್ಲೂ ನಟಿಸಿರಲಿಲ್ಲ. ಬಾಲಿವುಡ್ನಲ್ಲಿ ಮದುವೆಯಾಗಿ ಮಗುವಾದ್ಮೇಲೆ ಮತ್ತೆ ಬೆಳ್ಳಿತೆರೆಗೆ ಕಮ್ಬ್ಯಾಕ್ ಆಗಿರೋದು ಹೊಸತೇನಲ್ಲ. ಐಶ್ವರ್ಯಾ ರೈ ಬಚ್ಚನ್, ಕಾಜೋಲ್ ಸಕೆಂಡ್ ಇನ್ನಿಂಗ್ಸ್ ಆರಂಭಿಸಿರು ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ರಾಣಿಗೆ ನಿರ್ದೇಶಕ ಸಿದ್ಧಾರ್ಥ್ ಪಿ. ಮಲ್ಹೋತ್ರ ಹೇಳಿರುವ ಕಥೆಯೊಂದು ಇಷ್ಟವಾಗಿದೆ. ಹೀಗಾಗಿ ಈ ಸಿನಿಮಾದಲ್ಲಿ ರಾಣಿ ಮುಮುಖ ಪಾತ್ರ ನಿರ್ವಹಿಸಲಿದ್ದಾಳೆ.

ವಿಶೇಷ ಅಂದ್ರೆ ಈ ಚಿತ್ರವನ್ನು ಆಕೆಯ ಪತಿ ಆದಿತ್ಯ ಚೋಪ್ರ ನಿರ್ಮಾಣ ಮಾಡಲಿದ್ದಾರೆ. ಇಬ್ಬರಿಗೂ ಸಿದ್ಧಾರ್ಥ್ ಹೇಳಿದ ಕಥೆ ಇಷ್ಟವಾಗಿದ್ರಿಂದ ಕಮ್ಬ್ಯಾಕ್ ಆಗೋದಕ್ಕೆ ಇದೇ ಸೂಕ್ತ ಕಥೆ ಅಂತ ಗಂಡ ಹೆಂಡತಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಅಂದ ಹಾಗೆ ಇದು ಸಾಮಾಜಿಕ ಕಳಕಳಿಯುಳ್ಳ ಕಥೆ. ಚಿತ್ರದ ಟೈಟಲ್ ಉಳಿದ ತಾರಾಗಣ ಫೈನಲ್ ಆಗಿಲ್ಲ. ಮುಂದಿನ ವರ್ಷ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

Comments are closed.