ಮುಂಬೈ

ಮುಂಬೈಯಲ್ಲಿ ಮುಳುಗಿದ ಸರಕು ಸಾಗಣೆ ಹಡಗಿನಿಂದ 20 ಸಿಬ್ಬಂದಿಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ

Pinterest LinkedIn Tumblr

Navy-chopperweb

ಮುಂಬೈ, ಜೂ.22: ನೆರೆಯ ಪಾಲ್ಗಾರ್ ಜಿಲ್ಲೆಯ ವಸಾಯ್ ಕರಾವಳಿ ತೀರದಲ್ಲಿ ಸರಕು ಸಾಗಣೆ ಹಡಗೊಂದು ನೀರಿನಲ್ಲಿ ಮುಳುಗಿದೆ. ಮುಳುಗಡೆಯಾಗಿರುವ ಕಾಮಾಕ್ಷಿ ಜಿಂದಾಲ್ ಎಂಬ ಈ ಸರಕು ಸಾಗಣೆ ಹಡಗಿನಲ್ಲಿದ್ದ ಎಲ್ಲ 20 ಜನ ಸಿಬ್ಬಂದಿಯನ್ನೂ ಭಾರತೀಯ ನೌಕಾಪಡೆ ಹೆಲಿಕಾಪ್ಟರ್ ಬಳಸಿ ರಕ್ಷಣೆ ಮಾಡಲಾಗಿದೆ.

ವಸಾಯ್ ತೀರ ಪ್ರದೇಶದಿಂದ 25 ನಾಟಿಕಲ್ ಮೈಲು ಮತ್ತು ಮುಂಬೈ ಬಂದರು ಪ್ರದೇಶದಿಂದ 40 ನಾಟಿಕಲ್ ಮೈಲು ದೂರದಲ್ಲಿ ಈ ಹಡಗು ಮುಳುಗಿದ ಬಗ್ಗೆ ಮಧ್ಯರಾತ್ರಿ ಭಾರತೀಯ ನೌಕಾಪಡೆ ಕೇಂದ್ರಕ್ಕೆ ಸುದ್ದಿ ತಲುಪಿತು. ತಕ್ಷಣ ಕಾರ್ಯಪ್ರವೃತ್ತರಾದ ನೌಕಾಪಡೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಾಗಿ ಐಎನ್‌ಎಸ್ ಮುಂಬೈ ನೌಕೆ ಹಾಗೂ ಹೆಲಿಕಾಪ್ಟರ್‌ಗಳನ್ನು ಕಳುಹಿಸಿದ್ದರು.ಹಡಗನ್ನು ಮೇಲೆತ್ತುವ ಪ್ರಯತ್ನಗಳನ್ನು ಭಾರತೀಯ ನೌಕಾಪಡೆ ಮುಂದುವರಿಸಿದೆ. ಸದ್ಯ ರಕ್ಷಿಸಲ್ಪಟ್ಟ ಎಲ್ಲ ಸಿಬ್ಬಂದಿಯನ್ನೂ ಆಸ್ಪತ್ರೆಗೆ ಕಳುಹಿಸಲಾಗಿದೆ.

Write A Comment