ಮುಂಬೈ

ಜ.18:ಜೆ.ಬಿಮೊರಾಯಸ್ ಶೃದ್ದಾಂಜಲಿ-ಜೆ.ಬಿ ಸಿಕ್ವೇರಾ ಸ್ಮಾರಣಾರ್ಥ ಕವಿ ಸಮ್ಮೇಳನ

Pinterest LinkedIn Tumblr

44

ಮುಂಬಯಿ, ಜ.10: ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸಂಸ್ಥೆಯು ಇತ್ತೀಚೆಗೆ ಸ್ವರ್ಗಸ್ಥರಾದ (ಡಿ. 30) ಕೊಂಕಣಿ ಭಾಷೆಯ ಕವಿ, ಕಥೆಗಾರ, ನಾಟಕಕಾರ, ಲೇಖಕ, ಸಂಪಾದಕ, ಅನುವಾದಕ, ಸಂಘಟಕ ಎಂದೇ ಪ್ರಸಿದ್ಧಿ ಪಡೆದ ಜೆ.ಬಿ ಮೊರಾಯಸ್ (ಜೊನ್ ಬ್ಯಾಪ್ಟಿಸ್ಟ್ ಮೊರಾಯಸ್) ಅವರಿಗೆ ಶೃದ್ದಾಂಜಲಿ ಅರ್ಪಣಾ ಶೋಕ ಸಭೆಯನ್ನು ಆಯೋಜಿಸಿದೆ.

ಇದೇ ಜ.18ನೇ ಆದಿತ್ಯವಾರ ಸಂಜೆ 3.00 ಗಂಟೆಗೆ ಸೈಂಟ್ ಜೂಡ್ ಚರ್ಚ್ ಸಭಾಗೃಹ, ಜೆರಿಮೆರಿ, ಅಂಧೇರಿ-ಕುರ್ಲಾ ರಸ್ತೆ, ಕುರ್ಲಾ ಪಶ್ಚಿಮ ಮುಂಬಯ್-400 072 ಇಲ್ಲಿ ಆಯೋಜಿಸಿದ್ದು, ನಾಡಿನ ಸರ್ವ ಮೊರಾಯಸ್ ಹಿತೈಷಿಗಳು, ಸಾಹಿತ್ಯಾಭಿಮಾನಿಗಳು, ಕವಿ-ಲೇಖಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

ಶೋಕಸಭಾ ಕಾರ್ಯಕ್ರಮದ ಬಳಿಕ ವಾರ್ಷಿಕವಾಗಿ ನಡೆಸುವ ಕೊಂಕಣಿ ಭಾಷೆಯ ಹಿರಿಯ ಮತ್ತು ಹೆಸರಾಂತ ಕವಿ ದಿವಂಗತ ಕವಿರಾಜ್ ಜೆ. ಬಿ ಸಿಕ್ವೇರಾ ಸ್ಮಾರಣಾರ್ಥ ಕವಿ ಸಮ್ಮೇಳನ ಜೌಗಿಸಲಾಗುವುದು ಎಂದು ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಪರವಾಗಿ ಪ್ರಧಾನ ಕಾರ್ಯದರ್ಶಿ ಲಾರೆನ್ಸ್ ಡಿ’ಸೋಜಾ ಕಮಾನಿ ಈ ಮೂಲಕ ತಿಳಿಸಿದ್ದಾರೆ.

Write A Comment