ಕರ್ನಾಟಕ

‘ನಾನೆಂದೂ ಸ್ವಾಮೀಜಿಗಳಿಗೆ ಕವರ್ ಕಾಣಿಕೆ ನೀಡಿ ಅವರನ್ನು ಅಪಮಾನಿಸಿಲ್ಲ’: ಸಿದ್ಧರಾಮಯ್ಯ

Pinterest LinkedIn Tumblr

ಬೆಂಗಳೂರು: ಸ್ವಾಮೀಜಿಗಳನ್ನು ಮನೆಗೆ ಕರೆಸಿ ಅವರಲ್ಲಿ ಕೆಲವರಿಗೆ ಕವರ್ ಕಾಣಿಕೆ ನೀಡಿ,‌ ಅದನ್ನು ಚಿತ್ರೀಕರಿಸಿ ಮಾಧ್ಯಮಗಳಿಗೆ ಕೊಟ್ಟು ಸ್ವಾಮೀಜಿಗಳನ್ನು ಬ್ಲಾಕ್ ಮೇಲ್ ಮಾಡಿದ್ದು ಯಾರು ಎಂದು ಬಿಜೆಪಿ ನಾಯಕರು ಮೊದಲು ಹೇಳಲಿ.‌ ಅದರ ನಂತರ ಯಾರು ಲಿಂಗಾಯತರ ವಿರೋಧಿ ಎನ್ನುವುದನ್ನು ನಿರ್ಧರಿಸೋಣ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ಧರಾಮಯ್ಯ ಗುಡುಗಿದ್ದಾರೆ.

ರಾಜ್ಯದ ಸಾಮಾಜಿಕ‌ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಲಿಂಗಾಯತ-ವೀರಶೈವ ಮಠಗಳ ಬಗ್ಗೆ ನನಗೆ ವಿಶೇಷ ಗೌರವ ಇದೆ.
ಈ ಕಾರಣದಿಂದಾಗಿಯೇ‌ ಮಠದ ಅಭಿವೃದ್ಧಿ ಚಟುವಟಿಕೆಗಳಿಗೆ ನಮ್ಮ ಸರ್ಕಾರ ಸಕಲ ನೆರವು ನೀಡಿತ್ತು.

ನಾನೆಂದೂ ಸ್ವಾಮೀಜಿಗಳಿಗೆ ಕವರ್ ಕಾಣಿಕೆ ನೀಡಿ ಅವರನ್ನು ಅಪಮಾನಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Comments are closed.