ಕರ್ನಾಟಕ

ಹೆಂಡತಿ ಇಲ್ಲದ ಸಂದರ್ಭ ಮನೆಗೆ ಬಂದ ಪ್ರಿಯತಮೆ..!: ಮುಂದೆನಾಯಿತು ಗೊತ್ತಾ?

Pinterest LinkedIn Tumblr


ಬೆಂಗಳೂರು: ಮದುವೆ ಕಾರ್ಯಕ್ರಮಕ್ಕೆ ಪತ್ನಿ ಊರಿಗೆ ಹೋಗಿದ್ದಾಗ ಪತಿರಾಯ ಕಿರಾತಕ ಕೆಲಸ ಮಾಡಿದ್ದ. ಮನೆಗೆ ಸ್ನೇಹಿತೆಯನ್ನು ಕರೆಸಿಕೊಂಡಿದ್ದ..! ಈ ವೇಳೆ, ಆಕೆ ಮನೆಯಲ್ಲಿದ್ದ 27 ಲಕ್ಷ ರೂ. ಮೌಲ್ಯದ ಆಭರಣ ದೋಚಿ ಪರಾರಿಯಾಗಿದ್ದಾಳೆ..!

ಮಾರನೆಯ ದಿನ ಮನೆಗೆ ಬಂದ ಪತ್ನಿ, ಹಣ ಹಾಗೂ ಆಭರಣ ಕಾಣೆಯಾಗಿರುವ ಕುರಿತು ತನ್ನ ಪತಿಯನ್ನು ಪ್ರಶ್ನಿಸಿದ್ದಾಳೆ. ಈ ವೇಳೆ ಪೊಲೀಸರಿಗೆ ದೂರು ನೀಡಿದ ಪತಿರಾಯನ ಕಳ್ಳಾಟ ಬಯಲಾಗಿದೆ..!ಬಿದ್ದಿದ್ದಾನೆ.

ಉತ್ತರಹಳ್ಳಿ ಹೋಬಳಿ ಸಾರು ಹುಣಸೆ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಟೆಕ್ಕಿ ಧನಂಜಯ್‌, ಪತ್ನಿ ಮತ್ತು ಮಗನ ಜೊತೆ ವಾಸವಿದ್ದಾರೆ. ಸಹೋದರನ ಮದುವೆಗೆಂದು ನವೆಂಬರ್ 25ರಂದು ಇವರ ಪತ್ನಿ ಮತ್ತು ಮಗ ಉತ್ತರ ಪ್ರದೇಶಕ್ಕೆ ಹೋಗಿದ್ದರು.

ಡಿಸೆಂಬರ್ 10 ರಂದು ರಾತ್ರಿ ಸ್ನೇಹಿತನಿಗೆ ಕರೆ ಮಾಡಿದ ಧನಂಜಯ, ಫ್ಲ್ಯಾಟ್‌ನಲ್ಲಿ ಒಬ್ಬನೇ ಇದ್ದೇನೆ ಎಂದ. ಆಗ, ಅರ್ಪಿತಾ ಎಂಬಾಕೆಯ ನಂಬರ್‌ ನೀಡಿದ ಆತ, ಕರೆ ಮಾಡಿದರೆ ಮನೆಗೆ ಬರುತ್ತಾಳೆ ಎಂದಿದ್ದ. ಕರೆ ಮಾಡಿದಾಗ ಅರ್ಪಿತಾ ಮನೆಗೆ ಬಂದಿದ್ದಳು. ಇಬ್ಬರೂ ಪಾರ್ಟಿ ಮಾಡಿದ್ದಾರೆ. ನಂತರ ಸಿಗರೇಟು ಸೇದಲೆಂದು ಧನಂಜಯ ಕಾರಿನಲ್ಲಿ ಸಾಲು ಹುಣಸೆಗೆ ಹೋಗಿ ಕೆಲ ಹೊತ್ತಿನ ಬಳಿಕ ವಾಪಸ್‌ ಬಂದಿದ್ದಾನೆ. ಅಷ್ಟರಲ್ಲೇ ಮನೆಯಲ್ಲಿದ್ದ ಅರ್ಪಿತಾ ಕ್ಯಾಬ್‌ನಲ್ಲಿ ಹೊರಗೆ ಹೋಗಿದ್ದಳು.

ಡಿಸೆಂಬರ್ 12ರಂದು ನಗರಕ್ಕೆ ಮರಳಿದ ಧನಂಜಯನ ಪತ್ನಿ ಮತ್ತು ಮಗ ಪರಿಶೀಲಿಸಿದಾಗ ಆಭರಣ ಮತ್ತು ನಗದು ಕಾಣೆಯಾಗಿದ್ದವು. ಈ ಕುರಿತು ಕೇಳಿದಾಗ, ಸ್ನೇಹಿತೆ ಬಂದಿದ್ದಳು. ಆಕೆಯೇ 12.70 ಲಕ್ಷ ರೂ. ನಗದು ಮತ್ತು 15 ಲಕ್ಷ ರೂ. ಮೌಲ್ಯದ ಆಭರಣ ದೋಚಿದ್ದಾಳೆಂದು ತಿಳಿಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದ.

ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಅರ್ಪಿತಾಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ‘ನಾನು ಹಣ, ಆಭರಣ ಕಳವು ಮಾಡಿಲ್ಲ. ಸ್ನೇಹಿತನೇ ಕೊಟ್ಟಿದ್ದಾನೆ’ ಎಂದಿದ್ದಾಳೆ. ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

Comments are closed.