ಕರ್ನಾಟಕ

ಹಳೆ ದ್ವೇಷಕ್ಕಾಗಿ ಅನೈತಿಕ ಸಂಬಂಧ; ಯುವಕನ ಹತ್ಯೆ

Pinterest LinkedIn Tumblr


ಗದಗ: ಡಿಸೆಂಬರ್ 14 ರ ಸಂಜೆ ಗದಗ- ಬೆಟಗೇರಿ ಅವಳಿ ನಗರದಲ್ಲಿ ಆಟೋ ಚಾಲನೆ ಮಾಡ್ತಾಯಿದ್ದ 26 ವರ್ಷದ ರಮೇಶ ಹುಳಕಣ್ಣವರ ಎನ್ನುವ ಯುವಕನ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗದಗ ತಾಲೂಕಿನ ಮುಳಗುಂದ ರಸ್ತೆಯ ಈಚಲ ಬ್ರಿಡ್ಜ್ ಕೆಳಗೆ ಶವ ಎಸೆದು ಹೋಗಲಾಗಿತ್ತು. ಸ್ಥಳೀಯರು ಗದಗ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಅಂದು ರಾತ್ರಿಯೇ ಶವದ ಗುರುತು ಪತ್ತೆ ಮಾಡಿದ ಮೇಲೆ ಆತ ಗದಗ ಗಂಗಿಮಡಿ ನಿವಾಸಿ ರಮೇಶ ಎಂದು ಗುರುತು ಪತ್ತೆ ಮಾಡಿ ತನಿಖೆ ಆರಂಭ ಮಾಡಿದರು. ಆದರೆ, ಕುಟುಂಬಸ್ಥರು ಸೇರಿದಂತೆ ಸ್ನೇಹಿತರನ್ನು ವಿಚಾರಣೆ ನಡೆಸಿದರೂ, ಕೊಲೆಗೆ ನಿಖರವಾದ ಕಾರಣ ಮಾತ್ರ ಗೊತ್ತಾಗಿರಲಿಲ್ಲ. ಮೊದಲು ಈ ಕೊಲೆಯನ್ನು ಬಡ್ಡಿ ವ್ಯವಹಾರಕ್ಕಾಗಿ ಸ್ನೇಹಿತರೆ ಮಾಡಿರಬಹುದು ಎಂದು ಅನುಮಾನ ವ್ಯಕ್ತವಾಗಿತ್ತು. ಆದರೆ ಕೊಲೆಯಾದ ರಮೇಶನ ಫೋನ್​ ಕಾಲ್​ ಇತಿಹಾಸ ಜಾಲಾಡಿದಾಗ ಗೊತ್ತಗಿದ್ದು ಬೇರೆನೆ ಸತ್ಯ. ಕೊಲೆಯಾದ ರಮೇಶ ಹಾಗೂ ರಾಧಾಕೃಷ್ಣ ನಿವಾಸಿಯಾದ ಮಿನಾಜ್ ವಾಸೀಮ್ ಬೇಪಾರಿ ಎನ್ನುವ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಇದುವೇ ಕೊಲೆಗೆ ಕಾರಣವಾಗಿದೆ.

ಅಂದು ರಮೇಶನಿಗೆ ಕರೆ ಮಾಡಿ ಮಿನಾಜ್ ಮನೆಗೆ ಕರಿಸಿಕೊಂಡಿದ್ದಾಳೆ. ಮಿನಾಜ್ ಹಾಗೂ ರಮೇಶ ಮನೆಯಲ್ಲಿ ಏಕಾಂತದಲ್ಲಿ ಮಾತನಾಡುತ್ತಾ ಕುಳಿತಾಗ ಮಿನಾಜ್ ಗಂಡ ವಾಸೀಮ್ ಬೇಪಾರಿ, ಮಾಂಸವನ್ನು ಕತ್ತರಿಸುವ ಆಯುಧದಿಂದ ಹಲ್ಲೆ ಮಾಡಿದ್ದಾನೆ. ರಮೇಶನ ಕುತ್ತಿಗೆ ಬಲವಾದ ಪೆಟ್ಟಿನಿಂದ ಆತ ಸಾವನ್ನಪ್ಪಿದ್ದಾನೆ. ರಮೇಶನ ಶವವನ್ನು ಮನೆಯಲ್ಲಿಟ್ಟುಕೊಂಡು ಸಂಜೆಯಾಗುತ್ತಿದ್ದಂತೆ ಗೂಡ್ಸ್ ವಾಹನದಲ್ಲಿ ಶವವನ್ನು ಹಾಕಿಕೊಂಡು ಮುಳಗುಂದ ರಸ್ತೆ ಈಚಲ ಬ್ರಿಡ್ಜ್ ಕೇಳಗೆ ಎಸೆದು ಮನೆಗೆ ಮರಳಿದ್ದಾನೆ.

ಕೊಲೆಯಾದ ರಮೇಶನ ಕುಟುಂಬದ ಯುವತಿಗೆ ಈ ಹಿಂದೆ ವಾಸೀಮ್ ಬೇಪಾರಿ ಜೂಡಾಯಿಸಿದ ಪ್ರಕರಣ ಕೂಡ ದಾಖಲಾಗಿದೆ. ಈ ಕುರಿತು ರಮೇಶನ ಕುಟುಂಬ ವಾಸೀಮ್ ವಿರುದ್ಧ ದೂರು ನೀಡಿದ್ದು, ಈ ಪ್ರಕರಣದಲ್ಲಿ ಆರು ತಿಂಗಳ ಜೈಲು ವಾಸ ಕೂಡ ಅನುಭವಿಸಿದ್ದ ಈ ಆರೋಪಿ. ಈ ವೇಳೆ ವಾಸೀಮ್ ಹೆಂಡತಿ ರಮೇಶನ ಜೊತೆಗೆ ಅನೈತಿಕ ಸಂಬಂಧ ಕೂಡ ಬಹಿರಂಗ ಗೊಂಡಿತು. ಈ ಎರಡು ಕಾರಣದಿಂದ ರಮೇಶನನ್ನು ಹತ್ಯೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಇನ್ನು ಪ್ರಕರಣದಲ್ಲಿ ಸಹಾಯ ಮಾಡಿದ ವಾಸೀಮ್​ ಪತ್ನಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

Comments are closed.