ಕರ್ನಾಟಕ

ನನ್ನೊಂದಿಗೆ ಮುಂಬೈಗೆ ಬಂದವರಿಗೆ ಸಚಿವ ಸ್ಥಾನ ಖಚಿತ

Pinterest LinkedIn Tumblr


ಕೋಲಾರ: ನನ್ನ ಜತೆ ಮುಂಬೈಗೆ ಬಂದವರಿಗೆ ಸಚಿವ ಸ್ಥಾನ ಖಚಿತ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದೆ ಸಚಿವ ನಾಗೇಶ್(H Nagesh), ಹೈಕಮಾಂಡ್​​ನಿಂದ ಆದೇಶ ಬಂದ ಕೂಡಲೇ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ನನ್ನ ಜತೆ ಮುಂಬೈಗೆ ಬಂದಿದ್ದ ಸ್ನೇಹಿತರಿಗೆ ಸಚಿವ ಸ್ಥಾನ ಖಚಿತ ಎಂದರು.

ಖಾತೆ ಬದಲಾವಣೆ ಸಂಬಂಧ ಮಾಹಿತಿಯಿಲ್ಲ. ಈ ಬಗ್ಗೆ ಒಂದು ವಾರದಲ್ಲಿ ಗೊತ್ತಾಗುತ್ತದೆ. ಖಾತೆ ಬದಲಾವಣೆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ, ಬಿಜೆಪಿ ಪಕ್ಷ ಏನು ಜವಾಬ್ದಾರಿಯನ್ನು ಕೊಡುತ್ತದೆಯೋ ಅದನ್ನು ನಿಭಾಯಿಸಲು ನಾನು ಸಿದ್ದನಿದ್ದೇನೆ ಎಂದು ತಿಳಿಸಿದರು.

ಕೊರೋನಾ ಎರಡನೇ ಅಲೆ ಭೀತಿಯನ್ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೊರೋನಾ ಲಸಿಕೆ ಬಂದ ಕ್ಷಣ ಎಲ್ಲರಿಗೂ ಸಿಗಲ್ಲ. ಅಲ್ಲಿಯ ವರೆಗೆ ಎಲ್ಲರಿಗು ಮಾಸ್ಕ್ ಒಂದೇ ಲಸಿಕೆ ನೀಡಲಾಗುತ್ತದೆ. 65 ವರ್ಷ ಮೇಲ್ಪಟ್ಟವರಿಗೆ ಮೊದಲು ಲಸಿಕೆ ಸಿಗಲಿದೆ. ಒಂದೇ ಸಲ ಎಲ್ಲಾ ಲಸಿಕೆ ಸಂಗ್ರಹಿಸಲು, ಬಳಸಲು ಸಾಧ್ಯವಿಲ್ಲ. ಆದ್ಯತೆಯ ಮೇರೆಗೆ ಲಸಿಕೆ ಬರಲಿದೆ, ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂದು ಸಚಿವರು ತಿಳಿಸಿದರು.

Comments are closed.