ಹಾಸನ: ಹಾಸನದಲ್ಲಿ ವಿದ್ಯಾಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಕ್ಷಕಿ ಕೊರೊನಾಗೆ ಬಲಿಯಾಗಿರುವ ಘಟನೆ ವರದಿಯಾಗಿದೆ.
ದುರದೃಷ್ಟ ಎಂಬಂತೆ ಶಿಕ್ಷಕಿಯ ಪತಿಗೂ ಸೋಂಕು ತಗುಲಿ ಇಬ್ಬರೂ ಮೃತಪಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ರಾಜ್ಯದಲ್ಲಿ 180 ಶಿಕ್ಷಕ ವಾರಿಯರ್ಸ್ ಸಾವು
ಕೊರೊನಾದಿಂದಾಗಿ ರಾಜ್ಯದಲ್ಲಿ ಈವರೆಗೂ 184ಕ್ಕೂ ಹೆಚ್ಚು ಶಿಕ್ಷಕರು ಮೃತಪಟ್ಟಿದ್ದಾರೆ. 1,850ಕ್ಕೂ ಹೆಚ್ಚು ಶಿಕ್ಷಕರು ಸೋಂಕಿಗೆ ತುತ್ತಾಗಿದ್ದು, ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದವರೂ ಇದರಲ್ಲಿ ಸೇರಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ37 ಶಿಕ್ಷಕರು ಮೃತಪಟ್ಟಿದ್ದರೆ, ಕೊಪ್ಪಳದಲ್ಲಿ18, ಹಾವೇರಿಯಲ್ಲಿ17, ಬಾಗಲಕೋಟೆಯಲ್ಲಿ16 ಶಿಕ್ಷಕರು ಸಾವನಪ್ಪಿದ್ದಾರೆ. ಮೈಸೂರು, ಕೊಡಗು, ದ.ಕನ್ನಡ, ಉ.ಕನ್ನಡ ಜಿಲ್ಲೆಗಳಲ್ಲಿ ಕೊರೊನಾದಿಂದಾಗಿ ಮೃತಪಟ್ಟವರಲ್ಲಿ ಶಿಕ್ಷಕರು ಸೇರಿಲ್ಲ. ಸೋಂಕಿಗೆ ಒಳಗಾದ ಮತ್ತು ಮೃತಪಟ್ಟ ಶಿಕ್ಷಕರ ಜಿಲ್ಲಾವಾರು ಮಾಹಿತಿ ಇಂತಿದೆ.
ಜಿಲ್ಲೆ- ಸೋಂಕಿತರ ಸಂಖ್ಯೆ- ಸಾವಿನ ಸಂಖ್ಯೆ
ರಾಯಚೂರು- 100 -07
ಬಳ್ಳಾರಿ -135- 09
ಕೊಪ್ಪಳ- 80 -18
ಶಿವಮೊಗ್ಗ- ಸ್ಪಷ್ಟವಿಲ್ಲ – 08
ಚಿಕ್ಕಮಗಳೂರು -47 -05
ಹಾಸನ -130 -05
ಮೈಸೂರು -122 -0
ಚಾಮರಾಜನಗರ-22-01
ಮಂಡ್ಯ- 122- 03
ಕೊಡಗು-40-00
ದ.ಕನ್ನಡ-01 – 00
ಉಡುಪಿ – 06 – 01
ವಿಜಯಪುರ – 110 – 03
ಬಾಗಲಕೋಟೆ – 75 – 16
ಕಲಬುರಗಿ – 40 – 13
ಬೆಳಗಾವಿ – 124 – 37
ದಾವಣಗೆರೆ – 55 – 7
ಚಿತ್ರದುರ್ಗ-149- 09
ಹಾವೇರಿ-204- 17
ಗದಗ – 50 – 04
ಉ.ಕನ್ನಡ – 39 – 00
ಧಾರವಾಡ – 8 – 4
ತುಮಕೂರು – 63 – 4
ರಾಮನಗರ – 85 – 8
ಕೋಲಾರ – 03 – 1
ಚಿಕ್ಕಬಳ್ಳಾಪುರ – 09 – 03
ಬೆಂಗಳೂರು ಗ್ರಾ. – 38 – 01
ಬೆಂಗಳೂರು -00 – 00
ಒಟ್ಟು – 1,852-184
Comments are closed.