ಬೆಂಗಳೂರು: ಹ್ಯಾಂಬರ್ಗ್ ನಲ್ಲಿರುವ ಭಾರತೀಯ ಕಾನ್ಸುಲೇಟ್ ಆಯೋಜಿಸುತ್ತಿರುವ ಸ್ಟಾರ್ಟ್ ಅಪ್ ಸಮ್ಮೇಳನಕ್ಕೆ ಸಂಸದ ತೇಜಸ್ವಿ ಸೂರ್ಯ ಆಹ್ವಾನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಮ್ಮೇಳನದ ಭಾಷಣಕಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದು ಹಾಕುವಂತೆ ಯುರೋಪ್ ಖಂಡದ ಹಲವು ಭಾರತೀಯರ ಸಂಘಟನೆಗಳು ಆಗ್ರಹಿಸಿವೆ.
ಗ್ಲೋಮನ್ ಕನ್ಸಲ್ಟಿಂಗ್ ಜಿಎಂಬಿಎಸ್ ಸಹಭಾಗಿತ್ವದಲ್ಲಿ ಅಕ್ಟೋಬರ್ 7ರಂದು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದರೆ, ಜರ್ಮನಿಯ ಅನಿವಾಸಿ ಭಾರತೀಯರು ತೇಜಸ್ವಿ ಸೂರ್ಯ ಆಹ್ವಾನಕ್ಕೆ ವಿರೋಧಿಸಿದ್ದಾರೆ.
ಈ ಕುರಿತು ಜರ್ಮನಿಯ ರಾಯಭಾರಿ ಕಚೇರಿಗೆ ಪತ್ರ ಬರೆದಿರುವ ಅವರು, ತೇಜಸ್ವಿ ಸೂರ್ಯ ಅವರನ್ನು ಕರೆಸಿಸುತ್ತಿರುವ ಸಂಗತಿ ಬೇಸರ ತರಿಸಿದೆ. ಆರ್ಎಸ್ಎಸ್ನಿಂದ ಚಿರಪರಿಚಿತರಾಗಿರುವ ಅವರು ಅತ್ಯಂತ ಪ್ರಚೋದನಕಾರಿ ಮತ್ತು ಕೋಮುವಾದಿ ರಾಜಕಾರಣಿ. ಅವರ ಆಗಮನಕ್ಕೆ ವಿರೋಧವಿದೆ ಎಂದು ಪತ್ರದ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೇ, ತಮ್ಮ ಪತ್ರದಲ್ಲಿ ಸಂಸದರು ಕೋಮು ದ್ವೇಷ ಹಾಗೂ ವಿವಾದ ಹುಟ್ಟು ಹಾಕಿದ್ದ ನಾಲ್ಕು ವಿವಾದಾತ್ಮಕ ಟ್ವೀಟ್ ಉಲ್ಲೇಖಿಸಿದ್ದಾರೆ.
ಈ ಪತ್ರಕ್ಕೆ ಜರ್ಮನಿಯ ವಿವಿಧ ಭಾರತೀಯ ಸಂಘಟನೆಗಳು ಈ ಪತ್ರಕ್ಕೆ ಸಹಿಹಾಕುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಚೆನ್ನೈ ಸಾಲಿಡರಿಟಿ, ದಿ ಹ್ಯೂಮನಿಸಂ ಗ್ರೂಪ್, ಬೆಲ್ಜಿಯಂ ಸಾಲಿಡರಿಟಿ. ಇಂಡಿಯನ್ಸ್ ಅಗೇನೆಸ್ಟ್ ಸಿಎಎ, ಎನ್ ಆರ್ಸಿ ಎಂಡ್ ಎನ್ಪಿಆರ್-ಫಿನ್ಲ್ಯಾಂಡ್,, ಭಾರತ್ ಡೆಮಾಕ್ರಸಿ ವಾಚ್, ಇಂಡಿಯನ್ ಅಲೆಯನ್ಸ್ ಪ್ಯಾರಿಸ್, ಫೌಂಡೆಷನ್ ದಿ ಲಂಡನ್ ಸ್ಟೋರಿ ಸಮುದಾಯಗಳು ಪತ್ರಕ್ಕೆ ಸಹಿಮಾಡಿವೆ.
ಅಲ್ಲದೇ ಬೆಂಗಳೂರಿನಲ್ಲಿ ಸಿಎಎ ಪರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಎ ವಿರೋಧಿಸುವವರು ಎದೆ ಸೀಳಿದರೆ ಎರಡಕ್ಷರ ಇಲ್ಲದ ಪಂಕ್ಚರ್ಗಳು ಎಂದಿದ್ದ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
ಸಾರ್ವಜನಿಕವಾಗಿ ಮಾತನಾಡುವ ವೇಳೆ ತೇಜಸ್ವಿ ಸೂರ್ಯ, ಹೆಚ್ಚು ವಿವಾದಾತ್ಮಕ ಮತ್ತ ಕೋಮುವಾದಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಬಹಿರಂಗವಾಗಿ ಕೋಮುವಾದ ರಾಜಕಾರಣದ ದೃಷ್ಟಿಕೋನ ಹೊಂದಿದ್ದಾರೆ ಎಂದಿದ್ದಾರೆ.
ಯುರೋಪಿಯನ್ ಪ್ರಗತಿಪರ ಸಂಸ್ಥೆಗಳು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳ ಕಾಳಜಿಗಾಗಿ ಈ ವಿಷಯವನ್ನು ಮುನ್ನಕೆಗೆ ತರುತ್ತಿದ್ದೇವೆ. ಧರ್ಮಾಂಧತೆ, ಧ್ವೇಷಪೂರಿತ, ನಿರ್ದಿಷ್ಟ ಸಮುದಾಯಗಳ ವಿರುದ್ಧ ದ್ವೇಷವನ್ನು ಹುಟ್ಟುಹಾಕಲು ವಾಕ್ ಸ್ವಾತಂತ್ರವನ್ನು ಬಳಸಿಕೊಳ್ಳುವವರಿಗೆ ವೇದಿಕೆ ನೀಡಬಾರದು ಎಂದು ಇದೇ ವೇಳೆ ಮನವಿ ಮಾಡಿದ್ದಾರೆ.
Comments are closed.