ಕರ್ನಾಟಕ

ಹ್ಯಾಂಬರ್ಗ್​ ಸಮ್ಮೇಳನಕ್ಕೆ ತೇಜಸ್ವಿ ಸೂರ್ಯಗೆ ಆಹ್ವಾನ; ಜರ್ಮನಿಯ ಅನಿವಾಸಿ ಭಾರತೀಯ ಸಂಘಟನೆಗಳಿಂದ ವಿರೋಧ

Pinterest LinkedIn Tumblr

ಬೆಂಗಳೂರು: ಹ್ಯಾಂಬರ್ಗ್ ನಲ್ಲಿರುವ ಭಾರತೀಯ ಕಾನ್ಸುಲೇಟ್ ಆಯೋಜಿಸುತ್ತಿರುವ ಸ್ಟಾರ್ಟ್ ಅಪ್ ಸಮ್ಮೇಳನಕ್ಕೆ ಸಂಸದ ತೇಜಸ್ವಿ ಸೂರ್ಯ ಆಹ್ವಾನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಮ್ಮೇಳನದ ಭಾಷಣಕಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದು ಹಾಕುವಂತೆ ಯುರೋಪ್ ಖಂಡದ ಹಲವು ಭಾರತೀಯರ ಸಂಘಟನೆಗಳು ಆಗ್ರಹಿಸಿವೆ.

ಗ್ಲೋಮನ್​ ಕನ್ಸಲ್ಟಿಂಗ್​ ಜಿಎಂಬಿಎಸ್​ ಸಹಭಾಗಿತ್ವದಲ್ಲಿ ಅಕ್ಟೋಬರ್​ 7ರಂದು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದರೆ, ಜರ್ಮನಿಯ ಅನಿವಾಸಿ ಭಾರತೀಯರು ತೇಜಸ್ವಿ ಸೂರ್ಯ ಆಹ್ವಾನಕ್ಕೆ ವಿರೋಧಿಸಿದ್ದಾರೆ.

ಈ ಕುರಿತು ಜರ್ಮನಿಯ ರಾಯಭಾರಿ ಕಚೇರಿಗೆ ಪತ್ರ ಬರೆದಿರುವ ಅವರು, ತೇಜಸ್ವಿ ಸೂರ್ಯ ಅವರನ್ನು ಕರೆಸಿಸುತ್ತಿರುವ ಸಂಗತಿ ಬೇಸರ ತರಿಸಿದೆ. ಆರ್​ಎಸ್​ಎಸ್​ನಿಂದ ಚಿರಪರಿಚಿತರಾಗಿರುವ ಅವರು ಅತ್ಯಂತ ಪ್ರಚೋದನಕಾರಿ ಮತ್ತು ಕೋಮುವಾದಿ ರಾಜಕಾರಣಿ. ಅವರ ಆಗಮನಕ್ಕೆ ವಿರೋಧವಿದೆ ಎಂದು ಪತ್ರದ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೇ, ತಮ್ಮ ಪತ್ರದಲ್ಲಿ ಸಂಸದರು ಕೋಮು ದ್ವೇಷ ಹಾಗೂ ವಿವಾದ ಹುಟ್ಟು ಹಾಕಿದ್ದ ನಾಲ್ಕು ವಿವಾದಾತ್ಮಕ ಟ್ವೀಟ್​ ಉಲ್ಲೇಖಿಸಿದ್ದಾರೆ.

ಈ ಪತ್ರಕ್ಕೆ ಜರ್ಮನಿಯ ವಿವಿಧ ಭಾರತೀಯ ಸಂಘಟನೆಗಳು ಈ ಪತ್ರಕ್ಕೆ ಸಹಿಹಾಕುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಚೆನ್ನೈ ಸಾಲಿಡರಿಟಿ, ದಿ ಹ್ಯೂಮನಿಸಂ ಗ್ರೂಪ್​, ಬೆಲ್ಜಿಯಂ ಸಾಲಿಡರಿಟಿ. ಇಂಡಿಯನ್ಸ್​ ಅಗೇನೆಸ್ಟ್​ ಸಿಎಎ, ಎನ್​ ಆರ್​ಸಿ ಎಂಡ್​ ಎನ್​ಪಿಆರ್​-ಫಿನ್​ಲ್ಯಾಂಡ್​,, ಭಾರತ್​ ಡೆಮಾಕ್ರಸಿ ವಾಚ್​, ಇಂಡಿಯನ್​ ಅಲೆಯನ್ಸ್​ ಪ್ಯಾರಿಸ್​, ಫೌಂಡೆಷನ್​ ದಿ ಲಂಡನ್​ ಸ್ಟೋರಿ ಸಮುದಾಯಗಳು ಪತ್ರಕ್ಕೆ ಸಹಿಮಾಡಿವೆ.

ಅಲ್ಲದೇ ಬೆಂಗಳೂರಿನಲ್ಲಿ ಸಿಎಎ ಪರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಎ ವಿರೋಧಿಸುವವರು ಎದೆ ಸೀಳಿದರೆ ಎರಡಕ್ಷರ ಇಲ್ಲದ ಪಂಕ್ಚರ್​ಗಳು ಎಂದಿದ್ದ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ಸಾರ್ವಜನಿಕವಾಗಿ ಮಾತನಾಡುವ ವೇಳೆ ತೇಜಸ್ವಿ ಸೂರ್ಯ, ಹೆಚ್ಚು ವಿವಾದಾತ್ಮಕ ಮತ್ತ ಕೋಮುವಾದಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಬಹಿರಂಗವಾಗಿ ಕೋಮುವಾದ ರಾಜಕಾರಣದ ದೃಷ್ಟಿಕೋನ ಹೊಂದಿದ್ದಾರೆ ಎಂದಿದ್ದಾರೆ.

ಯುರೋಪಿಯನ್​ ಪ್ರಗತಿಪರ ಸಂಸ್ಥೆಗಳು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳ ಕಾಳಜಿಗಾಗಿ ಈ ವಿಷಯವನ್ನು ಮುನ್ನಕೆಗೆ ತರುತ್ತಿದ್ದೇವೆ. ಧರ್ಮಾಂಧತೆ, ಧ್ವೇಷಪೂರಿತ, ನಿರ್ದಿಷ್ಟ ಸಮುದಾಯಗಳ ವಿರುದ್ಧ ದ್ವೇಷವನ್ನು ಹುಟ್ಟುಹಾಕಲು ವಾಕ್​ ಸ್ವಾತಂತ್ರವನ್ನು ಬಳಸಿಕೊಳ್ಳುವವರಿಗೆ ವೇದಿಕೆ ನೀಡಬಾರದು ಎಂದು ಇದೇ ವೇಳೆ ಮನವಿ ಮಾಡಿದ್ದಾರೆ.

Comments are closed.