ಕರ್ನಾಟಕ

ಕೊರೊನಾ ವೈರಸ್‌ ಸೋಂಕು ಮಾಹಿತಿ ಮುಚ್ಚಿಟ್ಟ ಆರೋಪದ ಮೇರೆಗೆ ಇಬ್ಬರು ವೈದ್ಯರ ವಿರುದ್ಧ ದೂರು ದಾಖಲು

Pinterest LinkedIn Tumblr


ಬೆಂಗಳೂರು: ಕೊರೊನಾ ಸೋಂಕಿತನ ಬಗ್ಗೆ ಮಾಹಿತಿ ಮುಚ್ಚಿಟ್ಟ ಆರೋಪದ ಮೇರೆಗೆ ಇಬ್ಬರು ವೈದ್ಯರು ಹಾಗೂ ಸೋಂಕಿತನ ಸಹೋದರನ ವಿರುದ್ಧ ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು ಬಂಡೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಮಂಗಮ್ಮನಪಾಳ್ಯದ ಸೋಂಕಿತನ (ರೋಗಿ- 911) ಬಗ್ಗೆ ಡಾ. ಅಲ್ತಾಫ್‌ ಕ್ಲಿನಿಕ್‌ ವೈದ್ಯರು ಹಾಗೂ ಸೌಮ್ಯ ಕ್ಲಿನಿಕ್‌ನ ಡಾ. ಅವಿನಾಶ್‌ ಸಿಂಗ್‌ ಹಾಗೂ ಶಂಕಿತನ ಸಹೋದರ ಇಲಿಯಾಸ್‌ ಪಾಷ ಅವರ ವಿರುದ್ಧ ದೂರು ನೀಡಲಾಗಿದೆ.

ಈ ಮೂವರು ಕೊರೊನಾ ಸೋಂಕಿತನ ಬಗ್ಗೆ ಮಾಹಿತಿ ಗೊತ್ತಿದ್ದರೂ ಸರಕಾರ ಹಾಗೂ ಆರೋಗ್ಯ ಇಲಾಖೆಗೆ ನೀಡದ ಹಿನ್ನೆಲೆಯಲ್ಲಿ ಹಲವರಿಗೆ ಸೋಂಕು ಹರಡಲು ಕಾರಣವಾಗಿದೆ. ಆದ್ದರಿಂದ ಈ ಮೂವರ ವಿರುದ್ಧ ಸಾಂಕ್ರಾಮಿಕ ಕಾಯಿಲೆಗಳ ಕಾಯಿದೆಯಂತೆ ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ.

Comments are closed.