ಬೆಂಗಳೂರು(ಏ.03): ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ಮಾರಕ ಕೊರೋನಾ ವೈರಸ್ಗೆ ತತ್ತರಿಸಿ ಹೋದ ಕರ್ನಾಟಕದಲ್ಲಿನ ಜಿಲ್ಲೆಗಳನ್ನು ಮೂರು ಜೋನ್ಗಳನ್ನಾಗಿಸಿ ವಿಂಗಡಣೆ ಮಾಡಲಾಗಿದೆ. ಈ ಪೈಕಿ ರಾಜಧಾನಿ ಬೆಂಗಳೂರು ನಗರ, ಮೈಸೂರು, ಬೆಂಗಳೂರು ಗ್ರಾಮಾಂತರ ಮಾತ್ರ ರೆಡ್ ಜೋನ್ನಲ್ಲಿವೆ.
ರಾಜ್ಯದ 30 ಜಿಲ್ಲೆಗಳನ್ನು ಕೊರೋನಾ ಸೋಂಕಿತರು ಮತ್ತು ಸೋಂಕಿಗೆ ಬಲಿಯಾದವರ ಸಂಖ್ಯೆಗೆ ಅನುಗುಣವಾಗಿ ಮೂರು ಜೋನ್ಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ರೆಡ್ ಜೋನ್ನಲ್ಲಿ ಮೂರು ಜಿಲ್ಲೆಗಳಲಿದ್ದು, ಇನ್ನು ಆರೇಂಜ್ ಜೋನ್ಗಳಲ್ಲಿ 13 ಜಿಲ್ಲೆಗಳಿವೆ. ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ತುಮಕೂರು ಮತ್ತು ಗದಗ ಜಿಲ್ಲೆಗಳು ಆರೇಂಜ್ ಜೋನ್ ವ್ಯಾಪ್ತಿಗೆ ಬರುತ್ತವೆ.
ಇನ್ನು, ಗ್ರೀನ್ ಜೋನ್ ವ್ಯಾಪ್ತಿಯಲ್ಲಿ 14 ಜಿಲ್ಲೆಗಳಿವೆ. ಈ ವಲಯದಲ್ಲಿ ದಾವಣಗೆರೆ, ಉಡುಪಿ, ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ರಾಮನಗರ, ಕೊಡಗ, ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಗಳು ಇವೆ.
ಗ್ರೀನ್ ಮತ್ತು ಆರೇಂಜ್ ಜೋನ್ ಹೊರತುಪಡಿಸಿ ರೆಡ್ ಜೋನ್ ಜಿಲ್ಲೆಗಳಲ್ಲಿ ಮೇ 3ರ ನಂತರವೂ ಕೆಲವು ವಿನಾಯ್ತಿಗಳೊಂದಿಗೆ ಲಾಕ್ಡೌನ್ ಮುಂದುವರಿಯಲಿದೆ. ಗ್ರೀನ್ ಮತ್ತು ಆರೇಂಜ್ ಬಹುತೇಕ ಲಾಕ್ಡೌನ್ ತೆರವುಗೊಳಿಸದೆ ಹಲವು ಕ್ಷೇತ್ರಗಳಿಗೆ ವಿನಾಯ್ತಿ ನೀಡಲಾಗಿದೆ.
Comments are closed.