ಕರ್ನಾಟಕ

ಬಾರ್‌ ನಿಂದ 50,000 ರೂ. ಮೌಲ್ಯದ ಮದ್ಯ ಕಳವು

Pinterest LinkedIn Tumblr


ರಾಯಚೂರು: ಜಿಲ್ಲೆಯಲ್ಲಿ ಬಾರಿನ ಬಾಗಿಲು ಮುರಿದು ಮದ್ಯ ಕಳವು ಮಾಡಲಾಗಿದೆ. ಅಸ್ಕಿಹಾಳ ಬಳಿಯ ವೆಂಕಟೇಶ ಗೌಡ ಎಂಬುವವರಿಗೆ ಸೇರಿದ ರೇಣುಕಾ ಬಾರ್‌ನಲ್ಲಿ ಈ ಘಟನೆ ನಡೆದಿದೆ.

ಕೊರೊನಾ ವೈರಸ್‌ ಸೋಂಕು ನಿವಾರಿಸಲು ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿರುವುದರಿಂದ ಮದ್ಯ ದೊರೆಯುತ್ತಿಲ್ಲ. ಈ ಹಿನ್ನೆಲೆ ರಾಯಚೂರಿನ ಅಸ್ಕಿಹಾಳ ಬಳಿಯ ವೆಂಕಟೇಶ ಗೌಡ ಎಂಬುವವರಿಗೆ ಸೇರಿದ ರೇಣುಕಾ ಬಾರ್‌ನಲ್ಲಿ ಮಂಗಳವಾರ ಬೆಳಗಿನ ಜಾವ ಸುಮಾರು 50 ಸಾವಿರ ರೂ. ಮೌಲ್ಯದ ಮದ್ಯ ಕಳ್ಳತನ ಮಾಡಲಾಗಿದೆ.

ಅಲ್ಲದೆ, ಕದಿಯಲು ಬಂದವರು ಸಿಸಿಟಿವಿಯನ್ನು ಜಖಂಗೊಳಿಸಿ ಮದ್ಯ ಕದ್ದಿದ್ದಾರೆ. ಆದರೂ ಕಳ್ಳರು ಅಂಗಡಿಯೊಳಗೆ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಖಕ್ಕೆ ಮಾಸ್ಕ್ ಹಾಕಿ ಕೊಂಡು ಒಳನುಗ್ಗಿ ಮದ್ಯ ಕದ್ದಿರುವುದು ತಿಳಿದುಬಂದಿದ್ದು, ರಾಯಚೂರು ಪಶ್ಚಿಮ‌ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments are closed.