ಕರ್ನಾಟಕ

ಮಂಗನ ಕಾಯಿಲೆ, ತೀರ್ಥಹಳ್ಳಿಯಲ್ಲಿ 2 ಕೆಎಫ್‌ಡಿ ಪ್ರಕರಣ ದೃಢ

Pinterest LinkedIn Tumblr


ಸಾಗರ (ಶಿವಮೊಗ್ಗ): ಜಿಲ್ಲೆಯಲ್ಲಿ ಈ ವರ್ಷವೂ ಕಾಣಿಸಿಕೊಂಡಿರುವ ಕ್ಯಾಸನೂರ್‌ ಅರಣ್ಯ ಕಾಯಿಲೆ (ಕೆಎಫ್‌ಡಿ) ಸಂಬಂಧ ಫೆಬ್ರವರಿಯ ಮೊದಲಿನ ಎರಡು ದಿನ ನಡೆಸಿರುವ ರಕ್ತಪರೀಕ್ಷೆಯಲ್ಲಿ ತೀರ್ಥಹಳ್ಳಿಯ ಎರಡು ಪ್ರಕರಣಗಳಲ್ಲಿ ಪಾಸಿಟಿವ್‌ ಕಂಡುಬಂದಿವೆ. ಆದರೆ ಸಾಗರ ತಾಲೂಕಿನ ಶಂಕಿತ ಕೆಎಫ್‌ಡಿ ಜ್ವರ ಪೀಡಿತರ 22 ರಕ್ತದ ಸ್ಯಾಂಪಲ್‌ನಲ್ಲಿ ಒಬ್ಬರಲ್ಲೂ ಕೆಎಫ್‌ಡಿ ವೈರಸ್‌ ದೃಢಪಟ್ಟಿಲ್ಲ.

ಜ್ವರ ಪೀಡಿತರಿಂದ ಮುಂಜಾಗ್ರತಾ ಕ್ರಮವಾಗಿ ತಾಲೂಕಿನಾದ್ಯಂತ ಶಂಕಿತ ಮಂಗನ ಕಾಯಿಲೆ ಇರಬಹುದಾದ 22 ಪ್ರಕರಣಗಳಲ್ಲಿ ಆರೋಗ್ಯ ಇಲಾಖೆ ರಕ್ತದ ಸ್ಯಾಂಪಲ್‌ ತೆಗೆದುಕೊಂಡಿತ್ತು. ಇದರಲ್ಲಿ ಇಬ್ಬರಲ್ಲಿ ಕೆಎಫ್‌ಡಿ ವೈರಾಣು ಇರುವುದು ದೃಢಪಟ್ಟಿದೆ.

ಮತ್ತೆ ಬಂತು ಮಂಗನ ಕಾಯಿಲೆ

ಜನವರಿ 31 ಹಾಗೂ ಫೆಬ್ರವರಿ 1 ರಂದು ತಾಲೂಕಿನ ಬಂದಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 7, ಕಾರ್ಗಲ್‌ನಲ್ಲಿ 7, ಹೆಗ್ಗೋಡಿನಲ್ಲಿ ಮೂರು, ಆವಿನಹಳ್ಳಿಯಲ್ಲಿಎರಡು ಹಾಗೂ ಬ್ಯಾಕೋಡು, ಅರಳಗೋಡು, ಸಿರಿವಂತೆಗಳಲ್ಲಿ ತಲಾ ಒಬ್ಬರಿಂದ ರಕ್ತದ ಸ್ಯಾಂಪಲ್‌ ಸಂಗ್ರಹಿಸಲಾಗಿತ್ತು. ಇದನ್ನು ಶಿವಮೊಗ್ಗದ ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯ ನಡೆಸಿದ ಅಷ್ಟೂ ಪರೀಕ್ಷೆ ಫಲಿತಾಂಶ ನೆಗೆಟೀವ್‌ ಬಂದಿದೆ.

Comments are closed.