ಕರ್ನಾಟಕ

ದೀಪಿಕಾ ಪಡುಕೋಣೆ ಒಳ್ಳೆಯ ವಿಚಾರಗಳಿಗೆ ಬೆಂಬಲ ಸೂಚಿಸಿದರೆ, ಒಳ್ಳೆಯ ಸಿನಿಮಾಗಳನ್ನು ಜನರೇ ಮೆಚ್ಚಿ ನೋಡುತ್ತಾರೆ: ಪ್ರತಾಪ್​ ಸಿಂಹ

Pinterest LinkedIn Tumblr

ಮೈಸೂರು: ದೀಪಿಕಾ ಪಡುಕೋಣೆ ಒಳ್ಳೆಯ ವಿಚಾರಗಳಿಗೆ ಬೆಂಬಲ ಸೂಚಿಸದರೆ, ಒಳ್ಳೆಯ ಸಿನಿಮಾಗಳನ್ನು ಜನರೇ ಮೆಚ್ಚಿ ನೋಡುತ್ತಾರೆ. ನಟ ನಟಿಯರ ವರ್ತನೆಯನ್ನು ಎಲ್ಲವನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ.ಒಳ್ಳೆಯ ವಿಚಾರಗಳಿಗೆ ಬೆಂಬಲ ಕೊಡಲಿ ಎಂದು ಬಾಲಿವುಡ್​ ನಟಿ ದೀಪಿಕಾಗೆ ಸಂಸದ ಪ್ರತಾಪ್​ ಸಿಂಹ ಕಿವಿಮಾತು ಹೇಳಿದ್ದಾರೆ

ತಮ್ಮ ಬಹುನೀರಿಕ್ಷೆಯ ಸಿನಿಮಾ ‘ಚಪಾಕ್’​ ಪ್ರಚಾರದ ಜೊತೆಗೆ ಜೆಎನ್​ಯು ಹಿಂಸಾಚಾರಕ್ಕೆ ಒಳಗಾದ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ನಿನ್ನೆ ಜೆಎನ್​ಯು ಕ್ಯಾಂಪಸ್​ಗೆ ತೆರಳಿದ್ದರು. ಈ ಕುರಿತು ಹಲವು ಭಿನ್ನಾಭಿಪ್ರಾಯಗಳು ಕೇಳಿ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರು ಮೈಸೂರು-ಕೊಡಗು ಸಂಸದ, ದೀಪಿಕಾ ಅವರಿಗೆ ಹೋರಾಟದಲ್ಲಿ ಭಾಗಿಯಾಗ ಬೇಡಿ ಎಂದು ಹೇಳುವುದಿಲ್ಲ. ಒಳ್ಳೆಯ ವಿಚಾರಗಳಿಗೆ ಅವರು ಬೆಂಬಲ ನೀಡಲಿ. ಆಗ ಜನರೇ ಅವರ ಸಿನಿಮಾಗಳನ್ನು ಮೆಚ್ಚಿ ನೋಡುತ್ತಾರೆ. ಅವರ ಹೊಸ ಚಿತ್ರ ಬಿಡುಗಡೆಯಾಗುತ್ತಿದ್ದು, ಅವರಿಗೆ ಶುಭಕೋರುತ್ತೇನೆ. ಕೇವಲ ಜೆಎನ್​ಯು, ಜಾಮಿಯಾ ವಿವಿಗಳು ಮಾತ್ರವಲ್ಲ. ದೇಶಾದ್ಯಂತ 600ಕ್ಕೂ ಹೆಚ್ಚು ವಿವಿಗಳಿವೆ ಎಂದು ಮರೆಯಬಾರದು ಎಂದು ವ್ಯಂಗ್ಯವಾಡಿದ್ದಾರೆ.

ಘಟನೆ ಸಂಬಂಧ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ. ಘಟನೆಯಲ್ಲಿ ಎಬಿವಿಪಿ ಕಾರ್ಯಕರ್ತರಿಗೂ ಪೆಟ್ಟು ಬಿದ್ದಿದೆ. ಇದೀಗ ಸಿನಿಮಾ ನಟ ನಟಿಯರನ್ನು ಕರೆತಂದಿದ್ದಾರೆ. ಈ‌ ಮೂಲಕ ಪ್ರಕರಣಕ್ಕೆ ಬೇರೆ ರೂಪ ಕೊಡುವ ಯತ್ನ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.

ಜವಹರಲಾಲ್ ನೆಹರು ಸ್ಥಾಪಿಸಿದ ಜೆಎನ್​ಯು ವಿವಿಗೆ ಸ್ವತಃ ಇಂದಿರಾಗಾಂಧಿಯವರು ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಇಂದಿರಾ ಗಾಂಧಿಯವರಿಗೂ ಭಾಷಣ ಮಾಡದಂತೆ ಅಡ್ಡಿ ಪಡಿಸಲಾಗಿತ್ತು. ಪರಿಣಾಮ 45 ದಿನಗಳ ಕಾಲ ಜೆ.ಎನ್.ಯುವನ್ನು ಇಂದಿರಾ ಗಾಂಧಿಯವರು ಬಂದ್ ಮಾಡಿಸಿದ್ದರು. ಇದು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.

Comments are closed.