ಕರ್ನಾಟಕ

ಪಕ್ಷ ಮೀರಿ ಯಾರೂ ವ್ಯಕ್ತಿಗತವಾಗಿ ಬೆಳೆಯಲು ಸಾಧ್ಯವಿಲ್ಲ: ಯಡಿಯೂರಪ್ಪಗೆ ಈಶ್ವರಪ್ಪ ಟಾಂಗ್

Pinterest LinkedIn Tumblr


ಶಿವಮೊಗ್ಗ: ಪಕ್ಷವನ್ನು ಮೀರಿ ಯಾರೂ ವ್ಯಕ್ತಿಗತವಾಗಿ ಬೆಳೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ನ ಸಿದ್ದರಾಮಯ್ಯ ಆಗಲಿ, ಜೆಡಿಎಸ್ ನ ಕುಮಾರಸ್ವಾಮಿಯಾಗಲಿ ಅಥವಾ ಬಿಎಸ್ ಯಡಿಯೂರಪ್ಪನವರೇ ಆಗಲಿ ಪಕ್ಷದ ಬೆಂಬಲ ಇಲ್ಲದೆ ಅಧಿಕಾರಕ್ಕೆ ಏರಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ, ಸಚಿವ ಕೆಎಸ್ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಘಟನೆ ಮೀರಿ ಬೆಳೆಯಲು ಹೋದವರಿಗೆ ತಾತ್ಕಾಲಿಕ ಯಶಸ್ಸು. ಸಿದ್ದರಾಮಯ್ಯನವರು ತಾವೇ ಬೆಳೆದರು ವಿನಃ, ಪಕ್ಷವನ್ನು ಸಂಘಟಿಸಲೇ ಇಲ್ಲ. ಕುತಂತ್ರ ರಾಜಕಾರಣವೇ ಕಾಂಗ್ರೆಸ್ ನಿರ್ನಾಮಕ್ಕೆ ಕಾರಣವಾಗಿ ಸರಕಾರವೇ ಬಿದ್ದೋಯ್ತು ಎಂದು ಆರೋಪಿಸಿದರು.

ನಾನೂ ಸೇರಿದಂತೆ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಯಾರೇ ಆಗಲಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವಿಲ್ಲ. ಒಂದು ವೇಳೆ ಪಕ್ಷ ಮೀರಿ ಬೆಳೆಯಲು ಹೋದರೆ ಅವರು ನಾಶವಾಗಿ ಹೋಗುತ್ತಾರೆ ಎಂದು ಈಶ್ವರಪ್ಪ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

Comments are closed.