ಕರ್ನಾಟಕ

ಕೋಲಾರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲು ಹೋದ 6 ಮಕ್ಕಳು ನೀರು ಪಾಲು

Pinterest LinkedIn Tumblr

ಕೋಲಾರ: ಮೊಹರಂ ಹಬ್ಬದ ರಜೆ ಇರುವ ಕಾರಣ ಪುಟ್ಟ ಪುಟ್ಟ ಗಣೇಶ ಮೂರ್ತಿಗಳನ್ನು ತಯಾರಿಸಿ ವಿಸರ್ಜನೆ ಮಾಡಲು ಹೋಗಿದ್ದ 6 ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಲ್ಲಿ ಹೋಬಳಿಯ ಮರದಕಟ್ಟ ಕೆರೆಯಲ್ಲಿ ನಡೆದಿದೆ.

ಮೃತರದಲ್ಲಿ ನಾಲ್ವರು ಬಾಲಕಿಯರು ಸೇರಿದಂತೆ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. ರಕ್ಷಿತಾ, ತೇಜಾ, ವೈಷ್ಣವಿ, ವೀಣಾ, ರೋಹಿತ ಮತ್ತು ಧನುಷ್ ಮೃತ ಮಕ್ಕಳು.

ಮೊಹರಂ ಹಬ್ಬದ ರಜೆ ನಿಮಿತ್ತ ಮಕ್ಕಳು ತಾವೇ ಗಣೇಶ ಮೂರ್ತಿ ತಯಾರಿಸಿ ಆಟವಾಡುತ್ತಿದ್ದರು. ಬಳಿಕ ಮೂರ್ತಿ ವಿಸರ್ಜನೆ ಮಾಡಲು ಕೆರೆಗೆ ತೆರಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆ ಸಂಬಂಧ ಆಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.