ಕರಾವಳಿ

ಮುಂಬಯಿ : ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಾರ್ಷಿಕ ಮಹಾಸಭೆ, ಬಹಿರಂಗ ಅಧಿವೇಶನ

Pinterest LinkedIn Tumblr

ಮುಂಬಯಿ : ಅಧಿವೇಶನ ಅರ್ಥಪೂರ್ಣವಾಗಿ ನಡೆದಿದೆ. ನಮ್ಮ ಜಿಲ್ಲೆಗಳ ಅಭಿವೃದ್ದಿಯ ಬಗ್ಗೆ ನಮ್ಮ ಜಿಲ್ಲೆಗಳ ಎಲ್ಲಾ ರಾಜಕೀಯ ಧುರೀಣರು ನಮಗೆ ಸಹಕರಿಸುತ್ತಿದ್ದು, ಮಹಾನಗರದಲ್ಲಿನ ಎಲ್ಲಾ ಜಾತೀಯ ಸಂಘಟನೆಗಳ ಸಹಕಾರದಿಂದ ಜಿಲ್ಲೆಗಳ ಸಮಸ್ಯೆಗಳನ್ನು ಬಗೆಯರಿಸಲು ಅಸಾಧ್ಯವಾಗದು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಯವರು ಹೇಳಿದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 18 ನೆಯ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ 8, ರಂದು ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಹಾಲ್ ನಲ್ಲಿ ನಡೆದಿದ್ದು ಮಹಾ ಸಭೆಯ ಬಳಿಕ ನಡೆದ ನಗರದಲ್ಲಿನ ಉಭಯ ಜಿಲ್ಲೆಗಳ ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಗಣ್ಯ ವ್ಯಕ್ತಿಗಳು ಹಾಗೂ ಸಮಿತಿಯ ಪದಾಧಿಕಾರಿಗಳು ನಡೆಸಿದ ಸಂವಾದದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತೋನ್ಸೆ ಜಯಕೃಷ್ಣ ಶೆಟ್ಟಿ ಯವರು ಜಿಲ್ಲೆಗಳ ಸಮಸ್ಯೆಗಳಲೊಂದಾದ ನೀರಿನ ಸಮಸ್ಯೆ ಬಗ್ಗೆ ಹಿಂದೆಯೇ ಸರಕಾರದ ಗಮನಕ್ಕೆ ತಂದಿದ್ದು ನದಿಗಳ ಜೋಡನೆಯಿಂದಲೂ ಇದನ್ನು ಬಗೆಯರಿಸಬಹುದು ಎಂದರು.

ಸರಕಾರೇತರ ಸಂಘಟನೆ ಮತ್ತು ಸರಕಾರ ಒಂದುಗೂಡಿ ಜಿಲ್ಲೆಗಳ ಸಮಸ್ಯೆಯನ್ನು ಪರಿಹರಿಸಬಹುದು. ಈ ರೀತಿ ನಮ್ಮ ಜೆಲ್ಲೆಗಳನ್ನು ಉನ್ನತ ಮಟ್ಟಕ್ಕೇರಿಸಬಹುದು. ಮೆಟ್ರೋ ಯೋಜನೆಯಿಂದ ನಗರದ ಆರೇ ಕಾಲನಿಯಲ್ಲಿ ಮರಗಳನ್ನು ಕಡಿದರೂ ಸುಮಾರು ನೂರು ಎಕ್ರೆ ಜಾಗದಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸುದರಿಂದ ಮಾಲಿನ್ಯರಹಿತವನ್ನಾಗಿ ಮಾಡುವ ಬಗ್ಗೆ ನಾವು ಸರಕಾರದ ಗಮನಕ್ಕೆ ತರಲಿದ್ದೇವೆ ಎಂದರು.

ಸಮಿತಿಯ ಜಿಲ್ಲಾ ಉಪಾಧ್ಯಕ್ಷ ರಾದ ಜಗದೀಶ್ ಅಧಿಕಾರಿಯವರು ಮಾತನಾಡುತ್ತಾ ನಮ್ಮವರೇ ಆದ ಜಾರ್ಜ್ ಫೆರ್ನಾಂಡಿಸ್ ರ ಪ್ರೇರಣೆಯಿಂದ ಹಲವು ಪ್ರಗತಿಪರ ಕೆಲಸಗಳು ಆಗಿದ್ದು, ಹಲವು ಸಾಧನೆಗಳನ್ನು ಮಾಡಿರುವ ನಮ್ಮದು ಶ್ರೀಮಂತ ಜೆಲ್ಲೆಗಳು ರೈಲ್ವೇ, ಹೈವೇ, ಪೋರ್ಟ್, ಏರ್ ಪೋರ್ಟ್ ಗಳನೊಂದಿದ ನಮ್ಮ ಜಿಲ್ಲೆಗಳು ಕರ್ನಾಟಕದ ಹೆಬ್ಬಾಗಿಲು. ಪೂರ್ಣ ಚಂದ್ರನ ವ್ಯಕ್ತಿತ್ವವನ್ನು ಹೊಂದಿರುವ ತೋನ್ಸೆ ಜಯಕೃಷ್ಣ ಶೆಟ್ಟಿ ಯವರು ಎಲ್ಲ ಸಮುದಾಯದವರನ್ನು ಒಂದುಗೂಡಿಸಿ ಜಿಲ್ಲೆಗಳ ಪ್ರಗತಿಗಾಗಿ ಹೋರಾಡುತ್ತಿದ್ದು ಅಭಿನಂದನೀಯ.

ಉಪಾಧ್ಯಕ್ಷ ಪೆಲಿಕ್ಸ್ ಡಿ. ಸೋಜಾ ಮಾತನಾಡಿ ಜಲ ಸಂಗ್ರಹಣೆ, ಹೆಚ್ಚಿನ ಉದ್ಯೋಗಾವಕಾಶದ ಬಗ್ಗೆ ಮಾಹಿತಿಯಿತ್ತರು.

ಬಿಲ್ಲವರ ಅಸೊಷಿಯೇಶನ್ ಮುಂಬಯಿ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಜಿಲ್ಲೆಗಳಲ್ಲಿ ವಿದ್ಯತ್ ನ ಕೊರತೆಯಿಂದ ಸಣ್ಣ ಉದ್ಯಮಗಳ ಕೊರತೆಯುಂಟಾಗಿದೆ. ಅಭಿವೃದ್ದಿ ಕಾರ್ಯದಲ್ಲಿ ತೊಡಗಿರುವ ಈ ಸಂಸ್ಥೆಯನ್ನು ಬೆಳೆಸಿದಲ್ಲಿ ತುಳು ನಾಡು ಬೇಳೆಯಬಹುದು ಎಂದರು.

ಸಫಲಿಗ ಸೇವಾ ಸಂಘ ಮುಂಬಯಿ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯರು ಮಾತನಾಡುತ್ತಾ ಜಾಗತಿಕ ಮಟ್ಟದಲ್ಲೇ ಪರಿಸರ ಮಾಲಿನ್ಯದ ಸಮಸ್ಯೆಯಿದ್ದು ನಮ್ಮ ಜಿಲ್ಲೆಗಳಲ್ಲಿ ಅಭಿವೃದ್ದಿಯೊಂದಿಗೆ ಮರಗಿಡಗಳನ್ನು ನೆಟ್ಟು ಬೆಳೆಸುವ ಕೆಲಸಗಳೂ ಆಗಬೇಕಾಗಿದೆ ಎಂದರು.

ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ ಕುಲಾಲ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಜಿಲ್ಲೆ ಗಳ ಅಭಿವೃದ್ದಿಗೆ ಸಮಿತಿಯ ಕೊಡುಗೆ ಪ್ರಶಂಸನೀಯ ಎಂದರು.

ವಕ್ಕಲಿಕರ ಸಂಘ ಮಹಾರಾಷ್ಟ್ರವು ತಮ್ಮ ಸಂಪೂರ್ಣ ಸಹಕಾರವನ್ನು ವ್ಯಕ್ತಪಡಿಸಿದೆ ಎಂದು ಅಧ್ಯಕ್ಷ ಜಿತೇಂದ್ರ ಗೌಡ ತಿಳಿಸಿದರು.

ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾ. ಆರ್. ಎಂ. ಭಂಡಾರಿಯವರು ಮಾತನಾಡಿ ಕಾನೂನು ಸಲಹೆ ಬಗ್ಗೆಯೂ ನಾವು ಈ ಸಮಿತಿಗೆ ಸಹಕರಿಸುವೆವು ಎಂದರು.

ಕರ್ನಾಟಕ ವಿಶ್ವಕರ್ಮ ಅಸೋಶಿಯೇಶನ್ ಮುಂಬಯಿ ಅಧ್ಯಕ್ಷ ಸದಾನಂದ ಆಚಾರ್ಯರು ಮಾತನಾಡಿ ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಸಮಿತಿಯು ಮಾಡುತ್ತಿರುವ ಕೆಲಸಕ್ಕೆ ಬೆಂಬಲ ಸೂಚಿಸಿದರು.

ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷರಾದ ರಾಮಚಂದ್ರ ಗಾಣಿಗ ರು ಮಾತನಾಡುತ್ತಾ ಯವುದೇ ಸಮಸ್ಯೆ, ಅಪಮಾನವನ್ನು ಲೆಕ್ಕಿಸದೆ ಊರಿಗೆ ವಿದ್ಯತ್ ಸಂಪರ್ಕವನ್ನು ಒದಗಿಸಿದ ತೃಪ್ತಿ ನಮಗಿದೆ ಎಂದರು.

ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷರಾದ ರವಿ ದೇವಾಡಿಗರು ಮಾತನಾಡುತ್ತಾ ಎಲ್ಲರ ಸಹಕಾರದಿಂದ ಜಿಲ್ಲೆಗಳ ಅಭಿವೃದ್ದಿಯಾಗಲಿ ಎಂದರು.

ಬಿಲ್ಲವ ಚೇಂಬರ್ ಆಪ್ ಕಾಮರ್ಸ್ ಮತ್ತು ಇಂಡಷ್ಟ್ರೀಸ್ ನ ಕಾರ್ಯಾಧ್ಯಕ್ಷರಾದ ಎನ್. ಟಿ. ಪೂಜಾರಿಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಮಾಲಿನ್ಯ ನಿಯಂತ್ರಣಗೊಳ್ಳುದರೊಂದಿಗೆ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಉದ್ದಿಮೆಗಳು ಸ್ಥಾಪನೆಯಾಗಿ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿ ಎಂದರು.

ಬಂಟ್ಸ್ ಚೇಂಬರ್ ಆಪ್ ಕಾಮರ್ಸ್ ಮತ್ತು ಇಂಡಷ್ಟ್ರೀಸ್ ನ ಕಾರ್ಯಾಧ್ಯಕ್ಷರಾದ ಕೆ ಸಿ ಶೆಟ್ಟಿಯವರು ಮಾತನಾಡಿ ಪರಿಸರವು ಉತ್ತಮವಾದಲ್ಲಿ ಸರಕಾರದ ಮನವೊಲಿಸಿ ದೊಡ್ಡ ಮಟ್ಟದ ಉದ್ದಿಮೆಯನ್ನು ಸ್ಥಾಪಿಸಬಹುದು ಎಂದರು.

ನ್ಯಾ. ಡಿ. ಕೆ. ಶೆಟ್ಟಿಯವರು ಮಾತನಾಡಿ ಕೃಷಿ ಆಧಾರಿತ ಹಾಗು ಪೋಲ್ಯೂಟರಿ, ಡೈರಿ ಉದ್ದಿಮೆಗಳು ಗೃಹ ಕೈಗಾರಿಕೆಯಂತಿದ್ದು, ಹೋಟೇಲು ಉದ್ದಿಮೆಯಿಂದಾಗಿ ಇದಕ್ಕೆ ಬೇಡಿಕೆ ಅಧಿಕವಾಗಬಹುದು ಎಂದರು.

ಬಿ. ಎಸ್. ಕೆ. ಬಿ. ಅಸೋಷಿಯೇಶನಿನ ಅಧ್ಯಕ್ಷರಾದ ಸುರೇಶ್ ಎಸ್ ರಾವ್ ಮಾತನಾಡುತ್ತಾ ಈಗಾಗಲೇ ಕಟೀಲಿನಲ್ಲಿ ನೂರು ಹಾಸಿಗೆಯ ಎಲ್ಲಾ ಸೌಲಭ್ಯಗಳನ್ನೊಂದಿದ ಆಸ್ಪ್ತ್ರತ್ರೆಯನ್ನು ಸ್ಥಾಪಿಸಿದ್ದು ಅದರಲ್ಲಿ ಬಡತನದ ರೇಖೆಯಿಂದ ಕೆಳಗಿದ್ದವರಿಗೆ ಹಾಗೂ 70 ವರ್ಷಕ್ಕೆ ಮೇಲ್ಪಟ್ಟ ಎಲ್ಲಾ ವರ್ಗದ ಹಿರಿಯ ನಾಗರಿಕರಿಗೆ ಉಚಿತ ಸೇವೆಯನ್ನು ನೀಡುತ್ತಿದ್ದೇವೆ ಎಂದರು.

ಸಮಿತಿಯ ಮಾಜಿ ಅಧ್ಯಕ್ಷ ನ್ಯಾ. ಪ್ರಕಾಶ್ ಎಲ್ ಶೆಟ್ಟಿಯವರು ಮಾತನಾಡಿ ಜಿಲ್ಲೆಗಳಲ್ಲಿ ನೀರಿನ ಮಟ್ಟವು ತುಂಬಾ ಕೆಳಗಿದ್ದು ಇದರ ಬಗ್ಗೆ ಗಮನಹರಿಸಬೇಕಾಗಿದ್ದು ಎಲ್ಲರ ಸಹಕಾರ ಅಗತ್ಯ ಎಂದರು.

ಉಪಾಧ್ಯಕ್ಷರಾದ ಎಲ್. ವಿ. ಅಮೀನ್ ಮಾತನಾಡುತ್ತಾ ವಿದ್ಯುತ್ ಸಮಸ್ಯೆ ಬಗೆಯರಿದಾಗ ಜಿಲ್ಲೆಯ ಅಭಿವೃದ್ದಿ ಸಾದ್ಯ. ಸಣ್ಣ ಕೈಗಾರಿಕೆಗಳಿಂದ ದ್ಯೋಗ ಸೃಷ್ಟಿಸುವ ಕೆಲಸ ಮಾಡೋಣ ಎಂದರು.

ನ್ಯಾ. ಡಿ. ಕೆ. ಶೆಟ್ಟಿಯವರು ಮಾತನಾಡಿ ಕೃಷಿ ಆಧಾರಿತ ಹಾಗು ಪೋಲ್ಯೂಟರಿ, ಡೈರಿ ಉದ್ದಿಮೆಗಳು ಗೃಹ ಕೈಗಾರಿಕೆಯಂತಿದ್ದು, ಹೋಟೇಲು ಉದ್ದಿಮೆಯಿಂದಾಗಿ ಇದಕ್ಕೆ ಬೇಡಿಕೆ ಅಧಿಕವಾಗಬಹುದು ಎಂದರು.

ಪ್ರವೀಣ್ ನಾರಾಯಣ ದೇವಾಡಿಗರು ಮಾತನಾಡುತ್ತಾ ನೀರಿನ ಸಮಸ್ಯೆ ನಿವಾರಣೆ ಬಗ್ಗೆ ಮಾರ್ಗದರ್ಶನ ನೀಡಲು ತನ್ನ ಸಹಕಾರ ವ್ಯಕ್ತಪಡಿಸಿದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ ಕಾರ್ಯಕ್ರಮ ನಿರ್ವಹಿಸಿದ್ದು ಗೌರವ ಕಾರ್ಯದರ್ಶಿ ದೇವದಾಸ್ ಕುಲಾಲ್ ವಂದಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ, ಪಿ. ಧನಂಜಯ ಶೆಟ್ಟಿ, ಬಾಲಕೃಷ್ಣ ಭಂಡಾರಿ, ಚಂದ್ರಶೇಖರ ಅರ್, ಬೆಳ್ಚಡ, ಜಿ.ಟಿ. ಆಚಾರ್ಯ, ಕೆ. ಎಲ್. ಬಂಗೇರ, ಅಂತೋನಿ ಸಿಕ್ವೇರ, ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್,ಗೌರವ ಕಾರ್ಯದರ್ಶಿಗಳಾದ ರವಿ ಎಸ್.ದೇವಾಡಿಗ, ಫ್ರೊ. ಶಂಕರ್, ಹ್ಯಾರಿ ಸಿಕ್ವೇರ, ಬಿ. ಮುನಿರಾಜ್ ಜೈನ್, ದೇವದಾಸ್ ಕುಲಾಲ್, ಗೌರವ ಕೋಶಾಧಿಕಾರಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಗೌರವ ಜೊತೆ ಕೋಶಾಧಕಾರಿ ತುಳಸಿದಾಸ್ ಅಮೀನ್, ಸಮಿತಿಯ ವಕ್ತಾರರಾದ ದಯಾಸಾಗರ ಚೌಟ, ಮಾಜಿ ಅಧ್ಯಕ್ಷರುಗಳಾದ , ವಿಶ್ವನಾಥ ಮಾಡ, ಹರೀಶ್ ಕುಮಾರ್ ಶೆಟ್ಟಿ ಮತ್ತು ಧರ್ಮಪಾಲ ಯು. ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಡಾ. ಆರ್. ಕೆ. ಶೆಟ್ಟಿ, ಡಾ. ಪ್ರಭಾಕರ ಶೆಟ್ಟಿ ಬೋಳ, ಚಿತ್ರಾಪು ಕೆ ಎಂ ಕೋಟ್ಯಾನ್, ಡಾ. ಸುರೇಂದ್ರಕುಮಾರ್ ಹೆಗ್ಡೆ, ಹರೀಶ್ ಜಿ ಅಮೀನ್, ಸಮಿತಿಯ ಇತರ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಈಶ್ವರ ಎಂ. ಐಲ್     / ಚಿತ್ರ : ದಿನೇಶ್ ಕುಲಾಲ್

Comments are closed.