ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಅರವಿಂದ ಲಿಂಬಾವಳಿ ಹೆಸರು ಓಡಾಡುತ್ತಿದೆ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಲಿಂಬಾವಳಿ ವಿಷಯ ಪ್ರಸ್ತಾಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಕಲಾಪದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರ ಗೌರವ ಬೀದಿಪಾಲಾಗುತ್ತಿದೆ. ಇವತ್ತು ಅವರದ್ದು,ನಾಳೆ ನಮ್ಮದು ಬರುತ್ತದೆ. ಸೋಶಿಯಲ್ ಮಿಡಿಯಾ ಮೇಲೆ ಕಂಟ್ರೋಲ್ ಆಗಬೇಕು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸ್ಪೀಕರ್ ಬಳಿ ಒತ್ತಾಯ ಮಾಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ಅರವಿಂದ ಲಿಂಬಾವಳಿ ಅಂತವರಲ್ಲ, ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ ಎಂದು ಬಿಎಸ್ವೈ ಲಿಂಬಾವಳಿ ಪರ ಬ್ಯಾಟಿಂಗ್ ಮಾಡಿದರು.
ನಂತರ ಮಾತನಾಡಿದ ಅರವಿಂದ ಲಿಂಬಾವಳಿ ಅವರು, ಶಿವಲಿಂಗೇಗೌಡರು ಹೇಳಿದ್ದು ಸರಿಯಾಗಿದೆ, ಇದರ ಬಗ್ಗೆ ತನಿಖೆಯಾಗಲೇ ಬೇಕು. ಈ ಘಟನೆಯಿಂದ ನನ್ನ ಮರ್ಯಾದೆ ಹೋಗಿದೆ. ಇವತ್ತು ನನಗೆ, ನಾಳೆ ಅವರಿಗೆ ಆಗಬಹುದು ನಮ್ಮ ಕುಟುಂಬದ ಗೌರವದ ಕಥೆ ಏನಾಗಬೇಡ ಎಂದು ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸದನದಲ್ಲಿ ಕಣ್ಣೀರಾಕಿದ್ದಾರೆ.
Comments are closed.