ಮನೋರಂಜನೆ

ಕ್ಷಮೆ ಕೇಳದಿದ್ದರೇ ಮುಖಕ್ಕೆ ಮಸಿ: ರಶ್ಮಿಕಾಗೆ ಕನ್ನಡಪರ ಸಂಘಟನೆಗಳ​ ಎಚ್ಚರಿಕೆ!!

Pinterest LinkedIn Tumblr


ರಶ್ಮಿಕಾ ಮಂದಣ್ಣ ಅವರ ಮೊದಲ ಚಿತ್ರ ಕಿರಿಕ್ ಪಾರ್ಟಿ ಯ ನಟನೆ ಇಂದ ಸ್ಯಾಂಡಲ್ ವುಡ್ ನಲ್ಲಿ ಸಖತ್ ಫೇಮಸ್ ಆಗಿದ್ದರು. ಅವರ ನಟನೆಗೆ ಮೆಚ್ಚಿ ಪರ ಭಾಷೆಯಿಂದಲು ಅವರಿಗೆ ಆಫರ್ ಗಳ ಸರಮಾಲೆಯೆ ಬಂದಿತ್ತು,ಅವರು ಆಫರ್ ಗಳನ್ನು ಒಪ್ಪಿಕೊಂಡಿದ್ದರು. ನಮ್ಮ ಕನ್ನಡದ ನಟಿ ಬೇರೆ ಭಾಷೆಯಲ್ಲು ಫೇಮಸ್ ಆಗಿದ್ದನ್ನು ಕಂಡು ಕನ್ನಡಿಗರಿಗೆ ಬಹಳ ಸಂತಸವಾಗಿತ್ತು. ಆದರೆ ಇದೀಗ ಇದೇ ರಶ್ಮಿಕಾ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಹೌದು ಕನ್ನಡ ಬರೋದಿಲ್ಲ ಎಂಬ ರಶ್ಮಿಕಾ ಹೇಳಿಕೆಗೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ರಶ್ಮಿಕಾ ತೆಲುಗಿನ ಮೊದಲ ಸಿನಿಮಾ ರಿಲೀಸ್ ಗೆ ತಯಾರಾಗುತ್ತಿದ್ದಂತೆ ತೆಲುಗುವನ್ನು ಸ್ಪಷ್ಟವಾಗಿ ಮಾತನಾಡಲು ಪ್ರಯತ್ನಿಸಿದ್ದಾರೆ, ಆದರೆ ಕನ್ನಡದಲ್ಲಿ ಹಲವಾರು ಸಿನಿಮಾ ಮಾಡಿದ್ದರು ಕನ್ನಡ ಬರಲ್ಲ ಎಂದ ರಶ್ಮಿಕಾ ಮಾತು ಕನ್ನಡ ಪರ ಸಂಘಟನೆಯವರ ಆಕ್ರೋಶಕ್ಕೆ ಕಾರಣವಾಗಿದ್ದು, ಕನ್ನಡ ಪರ ಸಂಘಟನೆಯವರು ರಶ್ಮಿಕಾ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಅಲ್ಲದೇ ಇದೇ ಶುಕ್ರವಾರ ಬಿಡುಗಡೆಯಾಗಲಿರುವ ಡಿಯರ್ ಕಾಮ್ರೆಡ್​​ ಪ್ರದರ್ಶನಕ್ಕೆ ಅವಕಾಶ ನೀಡದಂತೆ ಕೂಡ ಆಗ್ರಹಿಸಿದ್ದಾರೆ. ಅಲ್ಲದೇ ರಶ್ಮಿಕಾ ಕನ್ನಡಿಗರ ಕ್ಷಮೆಯಾಚಿಸದೇ ಇದ್ದಲ್ಲಿ ಮುಖಕ್ಕೆ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಸಾಲು ಸಾಲು ಹಿಟ್​ ಚಿತ್ರಗಳ ಅಮಲು ತಲೆಗೇರಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ತಮ್ಮ ಹೇಳಿಕೆ ಮೂಲಕ ಕೋಟ್ಯಾಂತರ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದು, ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Comments are closed.