ಕರ್ನಾಟಕ

ನಾನು ಯಾಕೆ ಕಾಂಗ್ರೆಸ್‌ ಸೇರಿದ್ದು ಗೊತ್ತೇನ್ರಿ..? ಗೊತ್ತಿಲ್ದಿದ್ರೆ ಸುಮ್ನೆ ಕೂತ್ಗಳಿ

Pinterest LinkedIn Tumblr


ಬೆಂಗಳೂರು: ಸದನದಲ್ಲಿಂದು ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದ ಬಗ್ಗೆ ಮಾತನಾಡಿ ಸಿ.ಟಿ.ರವಿ ಸಿದ್ದರಾಮಯ್ಯರ ಕಾಲೆಳೆಯುವ ಪ್ರಯತ್ನ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಕಾಂಗ್ರೆಸ್‌ ಸೇರಿದ್ದು ಯಾಕೆ ಗೊತ್ತೇನ್ರಿ ಅಂತಾ ಪ್ರಶ್ನಿಸಿ, ವಿವರಣೆ ನೀಡಿದ್ರು.

ಹಿಂದೆ ದೇವೇಗೌಡರ ಬಗ್ಗೆ ಏನು ಹೇಳಿದ್ರಿ. ಆಗ ಬೈಯ್ದವರು, ಈಗ ಹೊಗಳೋಕೆ ಹೋಗ್ತಿರಲ್ಲ ಎಂದು ಸಿ.ಟಿ.ರವಿ ಕಿಚಾಯಿಸಿದ್ದು, ಸಿ.ಟಿ.ರವಿಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ನಾನು ಉಪಮುಖ್ಯಮಂತ್ರಿಯಾಗಿದ್ದೆ. ಆಗ ನಾನಾಗಿಯೇ ಹೊರಬರಲಿಲ್ಲ, ಉಚ್ಚಾಟಿಸಿದ್ರು. ಅದಕ್ಕೆ ನಾನು ಅಹಿಂದ ಕಟ್ಟಿ ಹೊರಬಂದೆ. ಕಾಂಗ್ರೆಸ್‌ಗೆ ಬಂದಿದ್ದು ನಾನು ಉಚ್ಚಾಟನೆಯಾದ ಮೇಲೆ. ಬಾಯಿಗೆ ಬಂದಂತೆ ಏನೇನೋ ಮಾತನಾಡಬೇಡ. ಸುಮ್ನೆ ಕೂತ್ಕೋಳಪ್ಪ ಎಂದ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ರು.

Comments are closed.