ಕರ್ನಾಟಕ

ಪಾಕ್​​ ಪ್ರಧಾನಿ ಜೊತೆ ಬಿರಿಯಾನಿ ತಿನ್ನಲು ನಾನು ಮೋದಿಯಂತೆ ಚೋರ್​​ ಅಲ್ಲ; ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಮಾಜಿ ಕ್ರಿಕೆಟಿಗ ನವಜೋತ್​​ ಸಿಂಗ್​​ ಸಿಧು ಹಾಗೇ ನೀವು ಪಾಕ್​​ ಪ್ರಧಾನಿ ಇಮ್ರಾನ್​​ ಖಾನ್​​ ಅವರನ್ನು ಅಪ್ಪಿಕೊಳ್ಳಿ ಎಂದ ಬಿಜೆಪಿ ಸಂಸದ ರಾಜೀವ್​​ ಚಂದ್ರಶೇಖರ್​​ ಅವರಿಗೆ ಮಾಜಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಟ್ವೀಟ್​​ ಮಾಡಿರುವ ಮಾಜಿ ಸಿಎಂ, “ಮಿಸ್ಟರ್​​ ರಾಜೀವ್ ನಾನು ಪ್ರಧಾನಿ ಮೋದಿಯವರ ಹಾಗೇ ಚೋರ್​​ ಅಲ್ಲ. ನಮ್ಮ ಶತ್ರು ದೇಶದ ಪ್ರಧಾನಿ ಜೊತೆಗೆ ಬಿರಿಯಾನಿ ತಿಂದಿದ್ದು ಮೋದಿಯವರೇ ಹೊರತು, ನಾನಲ್ಲ” ಎಂದು ಕುಟುಕಿದ್ದಾರೆ.

ಇತ್ತೀಚೆಗೆ ಪಾಕ್​ ಪ್ರಧಾನಿ ಇಮ್ರಾನ್​​ ಖಾನ್,​​ “ಇಂದು ಮೇ 4 ಹೋರಾಟಗಾರ ಟಿಪ್ಪು ಸುಲ್ತಾನ್ ಕೊನೆಯುಸಿರೆಳೆದ ದಿನ. ಗುಲಾಮಗಿರಿಗೆ ಶರಣಾಗಿ ಬದುಕುವುದಕ್ಕಿಂತ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಲೇಸು ಎಂದು ಟಿಪ್ಪು ಸಾವನ್ನಪ್ಪಿದ್ದರು. ಇವರು ನನಗೆ ಸ್ಪೂರ್ತಿ ಎಂದು ಟಿಪ್ಪು ಬಗ್ಗೆ ಟ್ವೀಟ್​​ ಮಾಡಿದ್ದರು.

ಟಿಪ್ಪು ಸುಲ್ತಾನ್​​ ಬಗೆಗಿನ ಇಮ್ರಾನ್​​ ಖಾನ್​ ಟ್ವೀಟ್​ ಅನ್ನು ರಿಟ್ವೀಟ್ ಮಾಡಿದ್ದ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್, “ಪ್ರೀತಿಯ ಸಿದ್ದರಾಮಯ್ಯನವರೇ ನವಜೋತ್​​ ಸಿಂಗ್​​ ಸಿಧುವಂತೆ ಇಮ್ರಾನ್ರನ್ನು ಅಪ್ಪಿಕೊಳ್ಳಲು ನಿಮಗಿದು ಸರಿಯಾದ ಸಮಯ. ಈ ಮೂಲಕ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ನೀವು ಫೇವರಿಟ್ ಆಗಲು ಸುಲಭ ದಾರಿ” ಎಂದಿದ್ದರು.

ಈ ಬೆನ್ನಲ್ಲೇ ಈ ಟ್ವೀಟ್​​ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯನವರು, ಮಿಸ್ಟರ್​​ ರಾಜೀವ್​​ ಚಂದ್ರಶೇಖರ್​​ ಟ್ವೀಟ್​​ ಮಾಡುವ ಮುನ್ನ ಒಮ್ಮೆ ಯೋಚಿಸಿ. ನಮ್ಮ ಶತ್ರು ದೇಶದ ಪ್ರಧಾನಿ ಜೊತೆ ಬಿರಿಯಾನಿ ತಿನ್ನಲು ನಾನು ನಿಮ್ಮ ಚೋರ್ ನರೇಂದ್ರ ಮೋದಿಯಲ್ಲ. ಜತೆಗೆ ಬಾಸ್​​ಗಳ ಸಂತೈಸಲು ನೈತಿಕತೆ ರಾಜಿ ಮಾಡಿಕೊಳ್ಳುವ ನಿಮ್ಮಂತೆ ಕೂಡ ನಾನು ಆಗಲ್ಲ ಎಂದು ತಪರಾಕಿ ಬಾರಿಸಿದ್ಧಾರೆ.

ಇನ್ನು ನಿಮ್ಮ ಬಾಸ್​​ಗಾಗಿ ಗುಲಾಮನಂತೆ ಬದುಕುತ್ತಿರುವ ನಿನಗಿಂತ ಟಿಪ್ಪು ಸುಲ್ತಾನನಂತೆ ಬದುಕುವುದು ಒಳ್ಳೆಯದು” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಇಬ್ಬರ ಟ್ವೀಟ್​​ ವಾರ್​​ ಸುತ್ತ ಭಾರೀ ಚರ್ಚೆ ನಡೆಯುತ್ತಿದೆ.

Comments are closed.